Friday, September 20, 2024
ಸುದ್ದಿ

ಆಂಬುಲೆನ್ಸ್ ಸಂಚಾರಕ್ಕಾಗಿ ಸಿಎಂ ವಾಹನ ತಡೆ ಹಿಡಿದ ಎಎಸ್ಐ ಸಿದ್ದೇಗೌಡ.

ಮೈಸೂರು : ಆಂಬುಲೆನ್ಸ್ ಸುಗಮ ಸಂಚಾರ ಸಲುವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ವಾಹನ ತಡೆದ ಕುವೆಂಪು ನಗರ ಸಂಚಾರ ಠಾಣೆಯ ಎಎಸ್ಐ ಸಿದ್ದೇಗೌಡ ಮತ್ತು ಮುಖ್ಯ ಹೆಡ್ ಕಾನ್ಸ್ಟೇಬಲ್ ರಮೇಶ್ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ .ಕಳೆದ ಮಂಗಳವಾರ ಸಿದ್ದರಾಮಯ್ಯನವರು ಹೂಟಗಹಳ್ಳಿಯಲ್ಲಿ  ನಡೆದ ಕಾಂಗ್ರೆಸ್ ಸಮಾವೇಶ ಮುಗಿಸಿಕೊಂಡು ರಾಮಕೃಷ್ಣ ನಗರದಲ್ಲಿ ಇರುವ ಮನೆಗೆ ರಿಂಗ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಬೋಗಾದಿ ಸರ್ಕಲ್ ನಲ್ಲಿ ರೋಗಪೀಡಿತ ವ್ಯಕ್ತಿಯನ್ನು ಹೊತ್ತೊಯ್ಯುತಿದ್ದ ಆಂಬುಲೆನ್ಸ್ ಬರುತ್ತಿರುವುದನ್ನು ಗಮನಿಸಿದ ಎಎಸ್ಐ ಸಿದ್ದೇಗೌಡ ಮತ್ತು ಮುಖ್ಯ ಹೆಡ್ ಕಾನ್ಸ್ಟೇಬಲ್ ರಮೇಶ್ ಆಂಬುಲೆನ್ಸ್ ಗೆ ಸುಗಮ ಹಾದಿ ಮಾಡಿ ಕೊಡಲು ಸಿ ಎಂ ಅವರ ಬೆಂಗಾವಲು ವಾಹನಕ್ಕೆ ಸನ್ನೆ ಮಾಡಿ ತಡೆದು ನಿಲ್ಲಿಸಿದ್ದಾರೆ ಬಳಿಕ ಆಂಬುಲೆನ್ಸ್ ಗಾಗಿ ವಾಹನಗಳನ್ನು ತಡೆದಿರುವುದಾಗಿ ಮಾಹಿತಿ ನೀಡಿದ್ದಾರೆ .ಬಳಿಕ ಸಿಎಂ ಮನೆಯತ್ತ ತೆರಳಿದ್ದಾರೆ .ಸ್ಥಳದಲ್ಲಿ ಇದ್ದ ಸಾರ್ವಜನಿಕರು ಪೋಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ .

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು

Leave a Response