Saturday, September 21, 2024
ಸುದ್ದಿ

ಹಿಂ.ಜಾ.ವೇ. ಮತ್ತು ವಿ.ಎಚ್.ಪಿ. ವತಿಯಿಂದ ಹಿಂದೂ ಧಮನ ನೀತಿಯ ವಿರುದ್ಧ ಪ್ರತಿಭಟನಾ ಪ್ರದರ್ಶನ – ಖಂಡನಾ ಸಭೆ

ಮಂಗಳೂರು : ಹಿಂದೂ ಜಾಗರಣಾ ವೇದಿಕೆ ಮಂಗಳೂರು ವಿಭಾಗದ ವತಿಯಿಂದ ದಕ್ಷಿಣ ಕನ್ನಡ

ಜಿಲ್ಲೆಯಾಧ್ಯಂತ ಹತ್ತು ಹಲಾವಾರು ಪ್ರಕರಣದಲ್ಲಿ ಹಿಂದೂ ಧಮನ ನೀತಿ, ಖಾಕಿ ತೊಟ್ಟ ಖಾದರ್ ನಂತಹ ಅಧಿಕಾರಿಗಳಿಂದ ಅಧಿಕಾರ ದುರುಪಯೋಗ, ಅಕ್ರಮ ಗೋಹತ್ಯೆ, ಲವ್ ಜಿಹಾದ್ ಮುಂತಾದ ಹಿಂದೂ ಧಮನ ನೀತಿಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ದಿನಾಂಕ : 11/10/2017 ಬುಧವಾರ, ಬೆಳಗ್ಗೆ ಘಂಟೆ 11:00 ಯಿಂದ 12.00 ಘಂಟೆವರೆಗೆ ಪ್ರತಿಭಟನಾ ಪ್ರದರ್ಶನ ಮತ್ತು ಖಂಡನಾ ಸಭೆ ನಡೆಸಲಿದೆ ಎಂದು ಹಿಂ.ಜಾ.ವೇ. ಕಹಳೆ ನ್ಯೂಸ್ ಗೆ ಮಾಹಿತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯ ಹತ್ತಾರು ಉದಾಹರಣೆ ಸಹಿತ ಜ್ವಲಂತ ಸಾಕ್ಷಿಗಳನ್ನು, ಘಟನೆಗಳನ್ನು ಒಳಗೊಂಡ ಕರಪತ್ರ ಈಗಾಗಲೇ ಜಿಲ್ಲೆಯಲ್ಲಿ ಕಾರ್ಯಕರ್ತರ ಮೂಲಕ ಮನೆ ಮನೆಗೆ ತಲುಪುತ್ತಿದ್ದು, ಭಾರೀ ಜನ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಜಾಹೀರಾತು

ಮೆಲುಕು : ಹಿಂ.ಜಾ.ವೇ. ಮುಖಂಡ ಜಗದೀಶ್ ಕಾರಂತರಿಗೆ ನಿನ್ನೆ ಪೂರ್ಣವಧಿ ಜಾಮೀನು ಲಭಿಸಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಜಾಗರಣಾ ಜಿಲ್ಲೆಯಾಧ್ಯಂತ ಪ್ರತಿಭಟನೆಗೆ ಮುಂದಾಗಿದೆ.

 

Leave a Response