Friday, September 20, 2024
ಸುದ್ದಿ

ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದವರ ಬಂಧನ – ಕಹಳೆ ನ್ಯೂಸ್

ಮಂಗಳೂರು: ವಳಚ್ಚಿಲ್‍ಪದವಿನ ಬಳಿಯಿರುವ ಶ್ರೀನಿವಾಸ ಕಾಲೇಜು ಬಳಿಯ ಬಸ್ಸು ತಂಗುದಾಣದ ಬಳಿ ಎಫ್‍ಝೆಡ್ ಮೋಟಾರು ಸೈಕಲ್‍ನಲ್ಲಿ ಬಂದು ವಿದ್ಯಾರ್ಥಿಗಳಿಗೆ ಮಾದಕ ಗಾಂಜಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಇಮ್ರಾನ್ ಮತ್ತು ಇಮ್ತಿಯಾಜ್ ಅಹಮ್ಮದ್ ಎಂದು ಶಂಕಿಸಲಾಗಿದೆ. ಆರೋಪಿಗಳಿಂದ ಸುಮಾರು 1 ಕೆ.ಜಿ. 350 ಗ್ರಾಮ್ ಗಾಂಜಾ, 15396 ನಗದು, ಎರಡು ಮೊಬೈಲ್ ಪೋನ್, ಒಂದು ಎಪ್‍ಝೆಡ್ ಮೋಟಾರು ಸೈಕಲ್‍ನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು