Friday, September 20, 2024
ಸುದ್ದಿ

ಮಂಗಳೂರು ದಸರಾ: ಎಚ್.ಡಿ.ಕುಮಾರಸ್ವಾಮಿಯಿಂದ ಚಾಲನೆ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ದಸರಾ ಉತ್ಸವವನ್ನು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಳೆಯ ಮಧ್ಯೆಯೂ ಮಂಗಳೂರು ದಸರಾ ಉತ್ಸವವನ್ನು ಉದ್ಘಾಟಿಸಿದರು.

ಈ ಸಮಾರಂಭದಲ್ಲಿ ಕುಮಾರಸ್ವಾಮಿ ದಸರಾ ಉತ್ಸವದ ಧ್ವಜವನ್ನು ಉತ್ಸವ ಸಮಿತಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್‌ ರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ರಾಜ್ಯದಲ್ಲಿ ಮೈಸೂರು ಅರಸರ ರಾಜ ಪರಂಪರೆಯೊಂದಿಗೆ ಮೈಸೂರು ದಸರಾ ನಡೆದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದ ಹಲವು ಕಡೆಗಳಲ್ಲಿ ದಸರಾ ಉತ್ಸವ ಆಚರಣೆಗೆ ಅನುದಾನದ ಬೇಡಿಕೆ ಇಡುತ್ತಿದ್ದಾರೆ. ಆದರೆ ಮಂಗಳೂರು ದಸರಾ ರಾಜ್ಯದಲ್ಲಿ ವಿಶಿಷ್ಟ ರೀತಿಯಲ್ಲಿ ನಡೆಯುತ್ತಿದೆ. ಜನರೆ ಸೇರಿ ದಸರಾ ಹಬ್ಬದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಇದೊಂದು ಜನರೇ ಸೇರಿ ನಡೆಸುತ್ತಿರುವ ಉತ್ಸವವಾಗಿದೆ ಎಂದರು.

ಜಾಹೀರಾತು

ಇನ್ನು ಕುದ್ರೋಳಿ ಕ್ಷೇತ್ರದಲ್ಲಿ ಮಂಗಳೂರು ದಸರಾ ಉತ್ಸವವನ್ನು ಉದ್ಘಾಟಿಸುವ ಭಾಗ್ಯ ನನಗೆ ದೊರೆತಿರುವುದು ನನ್ನ ಅದೃಷ್ಟದ ಕ್ಷಣವಾಗಿದೆ. ಈ ನಾಡು ಕಂಡ ಮಹಾನ್ ಧರ‍್ಮಿಕ ನಾಯಕ ನಾರಾಯಣ ಗುರೂಜಿಯಿಂದ ಮಾನರೆಲ್ಲಾ ಒಂದು ಮತ, ಒಂದು ಜಾತಿ, ಒಂದು ದೇವರಿಗೆ ಸೇರಿದವರು ಎನ್ನುವ ಸಂದೇಶ ದೊಂದಿಗೆ ಸ್ಥಾಪನೆಯಾದ ಕುದ್ರೋಳಿ ಕ್ಷೇತ್ರ ಜನಾರ್ದನ ಪೂಜಾರಿಯವರ ಮೂಲಕ ನವೀಕರಣಗೊಂಡಿದೆ.

ಈಗಿನ ರಾಜಕಾರಣಿಗಳಿಗೆ ಮಾದರಿಯಾಗುವ ಸರಳ ಸಜ್ಜನಿಕೆಯ ರಾಜಕಾರಣಿ ಅವರ ಆಹ್ವಾನಕ್ಕೆ ಗೌರವ ಸೂಚಿಸಿ ಕಾರ‍್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ ಎಂದು ಸಿಎಂ ಸಂತಸ ವ್ಯಕ್ತಪಡಿಸಿದರು.‌ ಸಿಎಂ ಕುಮಾರಸ್ವಾಮಿಯವ್ರನ್ನ ಸ್ವಾಗತಿಸಲು ದಸರಾ ರೂವಾರಿ, ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಸುಮಾರು ಒಂದು ಗಂಟೆಗಳ ಕಾಲ ದೇಗುಲದ ಎದುರು ಕುರ್ಚಿಯಲ್ಲಿ ಕೂತು ಮಳೆಯಲ್ಲಿ ನೆನೆದ ಘಟನೆಯೂ ನಡೀತು.

ಇನ್ನು ಕರ‍್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರನ್ನು ಜನರ‍್ದನ ಪೂಜಾರಿ ಅಭಿನಂದಿಸಿದರು. ಈ ಕಾರ‍್ಯಕ್ರಮದಲ್ಲಿ ಸಚಿವ ಯುಟಿ ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಕೋಟ ಶ್ರೀನಿವಾಸ ಪುಜಾರಿ, ಐವನ್ ಡಿ ಸೋಜ, ರಾಜೇಶ್ ನಾಯ್ಕಾ, ವೇದವ್ಯಾಸ ಕಾಮತ್, ಹರೀಶ್ ಕುಮಾರ್, ಭೋಜೇಗೌಡ, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಜೆ.ಆರ್.ಲೋಬೊ, ಮನಪಾ ಮೇಯರ್ ಭಾಸ್ಕರ ಕೆ‌ ಮೊದಲಾದವರು ಉಪಸ್ಥಿತರಿದ್ದರು.