Friday, September 20, 2024
ಸುದ್ದಿ

Breaking News : ಸಿ.ಎಂ. ಕುಮಾರಸ್ವಾಮಿ ಸಮಸ್ಯೆ ಬಗೆಹರಿಸುವ ಭರವಸೆ ; ಉಪವಾಸ ಕೈಬಿಟ್ಟ ಸುಬ್ರಹ್ಮಣ್ಯ ಸ್ವಾಮೀಜಿ – ಕಹಳೆ ನ್ಯೂಸ್

ಕುಕ್ಕೇ ಸುಬ್ರಹ್ಮಣ್ಯ : ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪವಾಸ ಸತ್ಯಾಗ್ರಹ ಅಂತ್ಯ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಮಣ್ಯಮಠ ದ ಸ್ವಾಮೀಜಿಗಳಾದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಕುಕ್ಕೇ ಸುಬ್ರಹ್ಮಣ್ಯದ ವಿವಾದಗಳಿಗೆ ಹಾಗು ಮಠದ ಮೇಲೆ ನಿರಂತರ ನಡೆಯುವ ಷಡ್ಯಂತರಗಳಿಗೆ ಬೆಸೆತ್ತು ಅ.13 ರಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ಶ್ರೀ ಸುಬ್ರಮಣ್ಯ ಮಠದ ಮಠಾಧಿಪತಿಗಳ ಗುರುಗಳಾದ ಪೇಜಾವರ ಶ್ರೀಗಳು ಹಾಗು ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳು ಹಲವು ಮಠಾಥಿಪತಿಗಳ, ಧಾರ್ಮಿಕ ಮುಂಖಡರ, ಜನಪ್ರತಿನಿಧಿಗಳ ವಿವಾದ ಬಗೆಹರಿಸುವ ಭರವಸೆ ಮತ್ತು ಉಪವಾಸ ಸತ್ಯಾಗ್ರಹವನ್ನು ಕೈ ಬಿಡಲು ಮಾಡಿಕೊಂಡ ಮನವಿ ಮೇರೆಗೆ ಇಂದು ಸತ್ಯಾಗ್ರಹವನ್ನು ಕೈ ಬಿಡುವುದಾಗಿ ಪತ್ರಿಕಾ ಗೋಷ್ಠಿ ಕರೆದು ತಿಳಿಸಿದ್ದಾರೆ.