Friday, September 20, 2024
ರಾಜಕೀಯಸುದ್ದಿ

ವಿಧಾನಸಭೆ ಉಪಚುನಾವಣೆ: ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ – ಕಹಳೆ ನ್ಯೂಸ್

ರಾಮನಗರ: ವಿಧಾನಸಭೆ ಉಪಚುನಾವಣೆಗೆ ಜೆಡಿಎಸ್​, ಕಾಂಗ್ರೆಸ್​ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪತಿ ಮುಖ್ಯಮಂತ್ರಿ ಎಚ್​. ಡಿ.ಕುಮಾರಸ್ವಾಮಿಯವರ ಜತೆ ಚುನಾವಣಾ ಕಚೇರಿಗೆ ತೆರಳಿ ಇಂದು ನಾಮಪತ್ರ ಸಲ್ಲಿಸಿದರು.

ಅನಿತಾ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಸುರೇಶ್​, ಡಿ.ಕೆ.ಶಿವಕುಮಾರ್​ ಭಾಗವಹಿಸಲಿಲ್ಲ. ಕಾಂಗ್ರೆಸ್​ ನಾಯಕರ ಪರವಾಗಿ ಶಾಸಕ ಮುನಿರತ್ನ ಉಪಸ್ಥಿತರಿದ್ದರು. ಈ ಉಪಚುನಾವಣೆಯಲ್ಲಿ ಜೆಡಿಎಸ್​ನೊಂದಿಗೆ ಮೈತ್ರಿಗೆ ವಿರೋಧಿಸಿದ್ದ ಸ್ಥಳೀಯ ಮುಖಂಡರು ಅಸಾಮಾಧನಗೊಂಡಿದ್ದಾರೆ ಎನ್ನಲಾಗಿದ್ದು, ನಾಮಪತ್ರ ಸಲ್ಲಿಕೆ ವೇಳೆ ಗೈರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಮಪತ್ರ ಸಲ್ಲಿಕೆ ಬಳಿಕ ಅನಿತಾಕುಮಾರಸ್ವಾಮಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಮತಯಾಚಿಸಿದರು.  ನಂತರ ಮಾತನಾಡಿದ ಸಿಎಂ ಕುಮಾರಸ್ವಾಮಿ, ನನ್ನನ್ನು ಮನೆ ಮಗನಂತೆ ಕೈಹಿಡಿದಿದ್ದೀರಾ. ದೇಶದ ಹಿತದೃಷ್ಟಿಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಅಭ್ಯರ್ಥಿ ನಾನೇ ಎಂದುಕೊಂಡು ಅನಿತಾ ಕುಮಾರಸ್ವಾಮಿಯವರನ್ನು ಗೆಲ್ಲಿಸಿ. ಕಾಂಗ್ರೆಸ್​, ಜೆಡಿಎಸ್​ ಒಟ್ಟಾಗಿ ಹೋದರೆ ರಾಜ್ಯದಲ್ಲಿ 28 ಕ್ಷೇತ್ರವನ್ನು ಗೆಲ್ಲಬಹುದು ಎಂದು ಹೇಳಿದರು.

ಜಾಹೀರಾತು

ರಾಜಕೀಯವಾಗಿ ರಾಮನಗರ ಕ್ಷೇತ್ರ ನನಗೆ ಜನ್ಮಕೊಟ್ಟಿದೆ. ನನಗೂ, ರಾಮನಗರಕ್ಕೂ ತಾಯಿ, ಮಗನ ಸಂಬಂಧ. ಅಪಪ್ರಚಾರಕ್ಕೆ ಕಿವಿಗೊಡಬೇಡಿ. ನನ್ನ ಆರೋಗ್ಯವನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದೇನೆ. ಮಣ್ಣಿಗೆ ಹೋಗುವವರೆಗೆ ರಾಮನಗರ ಎಂದು ಕನವರಿಸುತ್ತೇನೆ ಎಂದರು.

ಅನಿತಾ ಕುಮಾರಸ್ವಾಮಿ ಮಾತನಾಡಿ, ಪ್ರತಿ ಚುನಾವಣೆಯೂ ಅಗ್ನಿಪರೀಕ್ಷೆಯೇ ಆಗಿದೆ. ಇಲ್ಲಿ ಭಿನ್ನಮತ ಇಲ್ಲ. ಹಿಂದಿನಿಂದಲೂ ಕ್ಷೇತ್ರದಲ್ಲಿ ಜೆಡಿಎಸ್​, ಕಾಂಗ್ರೆಸ್​ ಫೈಟ್​ ಮಾಡುತ್ತ ಬಂದಿವೆ. ಈಗ ಸಹಜವಾಗಿ ಅವರಿಗೆ ಬೇಸರವಾಗಿರಬಹುದು. ನಾನು ಜನರ ಕೈಗೆ ಸುಲಭವಾಗಿ ಸಿಗುತ್ತೇನೆ ಎಂದು ಹೇಳಿದರು.