Friday, September 20, 2024
ಸುದ್ದಿ

ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಅನುದಾನದ ಪ್ರತಿಭಟನೆ ರಾಜಕೀಯ ಪ್ರೇರಿತ: ಮಿಥುನ್ ರೈ – ಕಹಳೆ ನ್ಯೂಸ್

ಮಂಗಳೂರು: ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಅನುದಾನ ವಿಚಾರ ಸಂಘಪರಿವಾರದ ಪ್ರತಿಭಟನೆ ರಾಜಕೀಯ ಪ್ರೇರಿತವಾದದ್ದು. ಬಿಜೆಪಿಗರದ್ದು ಪ್ರಚಾರಕ್ಕೆ ಮಾಡಿದ ಪ್ರತಿಭಟನೆ, ನಾವು ಯಾವತ್ತೂ ಕಸಾಯಿಖಾನೆ ಬೇಕು ಎಂದಿಲ್ಲ ಎಂದು ಮಿಥುನ್ ರೈ ತಮ್ಮ ಆಕ್ರೊಶವನ್ನು ವ್ಯಕ್ತಪಡಿಸಿದ್ದಾರೆ.

ಮಂಗಳೂರಲ್ಲಿ ಮಾತನಾಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸ್ವಚ್ಚತಾ ದೃಷ್ಟಿಯಿಂದ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅನುದಾನ ಸಿಕ್ಕಿದ್ದು ಬಿಜೆಪಿಯ ಮಂದಿಯೇ ಟೆಂಡರ್‌ನಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ವೇಳೆ ಸಚಿವ ಖಾದರ್ ವಿರುದ್ದ ಅವಾಚ್ಯ ಪದ ಬಳಕೆಗೆ ಖಂಡನೆ ಜಿಲ್ಲಾ ರಾಜಕಾರಣಿಗಳಿಗೆ ಶೋಭೆ ತರಲ್ಲ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು