Friday, September 20, 2024
ಸುದ್ದಿ

ಬಾಲಕೃಷ್ಣ ಬಿ.ಎಂ. ಹೊಸಂಗಡಿ ಅವರಿಗೆ ಡಾಕ್ಟರೇಟ್ ಪದವಿ – ಕಹಳೆ ನ್ಯೂಸ್

ಕಾಸರಗೋಡು: ಇಲ್ಲಿನ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಾಲಕೃಷ್ಣ ಬಿ.ಎಂ. ಹೊಸಂಗಡಿ ಅವರು ಡಾ. ರಾಧಾಕೃಷ್ಣ ಎನ್. ಬೆಳ್ಳೂರು ಅವರ ಮಾರ್ಗದರ್ಶನದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯಕ್ಕೆ ಸಮರ್ಪಿಸಿದ `ದ್ರಾವಿಡ ನವ್ಯ ಕಾವ್ಯ’ ಎಂಬ ಮಹಾಪ್ರಬಂಧವು ಡಾಕ್ಟರ್ ಆಫ್ ಫಿಲಾಸಫಿ ಪದವಿಗೆ ಅರ್ಹವಾಗಿದೆ ಎಂದು ಕಣ್ಣೂರು ವಿಶ್ವವಿದ್ಯಾನಿಲಯದ ಅಧಿಸೂಚನೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸಂಗಡಿ ಅವರು ದ್ರಾವಿಡ ನವ್ಯ ಕಾವ್ಯ ಸಂಶೋಧನೆಯ ಸಂದರ್ಭದಲ್ಲೇ ಲಂಡನ್ ವಿಶ್ವವಿದ್ಯಾನಿಲಯದ ಟಿಎಸ್ ಎಲಿಯಟ್ ಇಂಟರ್‌ನ್ಯಾಷನಲ್ ಸಮ್ಮರ್ ಸ್ಕೂಲ್ 2013 ರ ಬರ್ಸರಿ ಅವಾರ್ಡ್ಗೂ ಪಾತ್ರರಾಗಿದ್ದರು.

ಜಾಹೀರಾತು

ಇವರ ಸಂಶೋಧನ ಲೇಖನಗಳು ದೇಶ-ವಿದೇಶಗಳ ವಿವಿಧ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡನೆಯಾಗಿದ್ದು, ಪ್ರತಿಷ್ಠಿತ ಸಂಶೋಧನ ನಿಯತಕಾಲಿಕೆಗಳಲ್ಲೂ ಪ್ರಕಟವಾಗಿವೆ.