Friday, September 20, 2024
ಸುದ್ದಿ

ಲಕ್ಷ್ಮಣನನ್ನೇ ಮರುಜೀವಗೊಳಿಸಿದ ಆ ಸಂಜೀವಿನಿ, ಇದೀಗ ಎಲ್ಲಿದೆ ಗೊತ್ತಾ?!! ಇದೇ ಹನುಮಂತನು ಸಂಜೀವಿನಿ ಪರ್ವತವನ್ನು ಹೊತ್ತು ತಂದಿರುವುದಕ್ಕೆ ಸಾಕ್ಷಿ!!

ಅಂದು ಲಕ್ಷ್ಮಣನು ಯುದ್ದದಲ್ಲಿ ಅಸುನೀಗಿದಾಗ ಆತನನ್ನು ಮರುಜೀವಗೊಳಿಸಲು ರಾಮನ ಭಂಟನಾದ ಕೇಸರಿತನಯ, ಮಹಾಜ್ಞಾನಿ, ಮಹಾಬುದ್ದಿವಂತನೆಂದು ಕರೆಸಿಕೊಳ್ಳುವ ಹನುಮಂತನು ಹೊತ್ತು ತಂದ ಸಂಜೀವಿನಿ ಪರ್ವತದಲ್ಲಿದ್ದ ಸಸ್ಯದಿಂದಾಗಿ ಪ್ರಾಣ ಉಳಿಯಿತು ಎನ್ನುವ ವಿಚಾರ ತಿಳಿದೇ ಇದೆ!! ಕೇವಲ 5 ಬಗೆಯ ಔಷಧೀಯ ಸಸ್ಯವನ್ನು ತರುವ ಬದಲು ಈಡೀ ಸಂಜೀವಿನಿ ಪರ್ವತವನ್ನೇ ಹೊತ್ತು ತಂದ ಹನುಮಂತನು ಆ ಪರ್ವತವನ್ನೇಲಿರಿಸಿದ ಗೊತ್ತಾ?

ಸಂಜೀವಿನಿ ಸಸ್ಯವನ್ನು ತರಲು ಹೊರಟ ಹನುಮಂತನಿಗೆ, ಹಿಮಾಲಯದಲ್ಲಿರುವ ಸಂಜೀವಿನಿ ಪರ್ವತ ತಲುಪಿದಾಗ ಆತನಿಗೆ ಅಲ್ಲಿರುವ ಎಲ್ಲ ಸಸ್ಯಗಳು ಕೂಡ ಸಂಜೀವಿನಿಯಂತೆಯೇ ಗೋಚರಿಸಿದವು. ಭಾರತದಲ್ಲಿರುವ ಸುಮಾರು 18,000 ಪುಷ್ಪಸಸ್ಯಗಳ ರಾಶಿಯಿಂದ ‘ಸಂಜೀವಿನಿ’ ಎಂಬ ಏಕೈಕ ಪ್ರಭೇದವನ್ನು ಹುಡುಕುವ ಕ್ರಿಯೆಯೇನು ಸರಳವಾದ ವಿಚಾರವೇನಲ್ಲ. ಹಾಗಾಗಿ ಈಡೀ ಪರ್ವತವನ್ನೇ ಹೊತ್ತು ತಂದ ಹನುಮಂತನು ಲಕ್ಷ್ಮಣನನ್ನು ಮಾತ್ರ ಅಲ್ಲದೇ ತಮ್ಮ ಸೈನ್ಯದಲ್ಲಿ ಅಸುನೀಗಿದ ಅದೆಷ್ಟೋ ಸೈನಿಕರ ಪ್ರಾಣವನ್ನು ಉಳಿಸುವಲ್ಲಿ ಸಹಕಾರಿಯಾಗುವಂತೆ ಮಾಡಿದೆ!! ಆದರೆ ಬೃಹತ್ ಹುಲ್ಲಿನ ಮೆದೆಯಲ್ಲಿ ಎಲ್ಲೋ ಹುದುಗಿಕೊಂಡಿರುವ ಸೂಜಿಯನ್ನು ಹುಡುಕಿದಷ್ಟೆ ಕ್ಲಿಷ್ಟವೂ, ಸೂಕ್ಷ್ಮವೂ ಆದ ಕೆಲಸವಾಗಿದ್ದ ಈ ಸಂಜೀವಿನಿ ಇದೀಗ ಶ್ರೀಲಂಕಾದ ಪರ್ವತದಲ್ಲಿ ಪತ್ತೆಯಾಗಿದೆ ಎನ್ನುವ ಮಾಹಿತಿ ದೊರೆತಿದೆ!!
ಹೌದು…. ರಾವಣನ ಲಂಕೆಯಲ್ಲಿ ನಡೆದ ಯುದ್ದದ ಸಂದರ್ಭದಲ್ಲಿ, ಈಡೀ ಸಂಜೀವಿನಿ ಪರ್ವತವನ್ನು ಎತ್ತಿ ತಂದಿದ್ದು ಲಂಕೆಗೆ. ಹಾಗಾಗಿ ಈ ಸಂಜೀವಿನಿ ಸಸ್ಯವು ಶ್ರೀಲಂಕಾದಲ್ಲಿರುವ ಪರ್ವತದಲ್ಲಿದೆಯಂತೆ. ಈ ಪರ್ವತದಲ್ಲಿರುವ ಸಾವಿರಾರು ಗಿಡಮೂಲಿಕೆಯ ಸಸ್ಯಗಳು ಆ ಪ್ರದೇಶದ ಜನರಿಗೆ ಅದೇನೇ ಸಮಸ್ಯೆ ಬಂದರು ಕೂಡ ಇಲ್ಲಿರುವ ಗಿಡಮೂಲಿಕೆಗಳೇ ಅವರಿಗೆ ಸಂಜೀವಿನಿಯಾಗುತ್ತಿವೆ !! ಅಷ್ಟೇ ಅಲ್ಲದೇ, ಅದೆಷ್ಟೋ ವಿಜ್ಞಾನಿಗಳು, ಸಂಶೋಧಕರು ಈ ಒಂದು ಪ್ರದೇಶಕ್ಕೆ ಭೇಟಿ ನೀಡಿದ್ದು, ಈ ಪ್ರದೇಶದ ಬಗ್ಗೆ ಸಾಕಷ್ಟು ಪರಿಶೋಧನೆಗಳನ್ನು ಮಾಡಿದ್ದಾರೆ!!
ಶ್ರೀಲಂಕಾದಲ್ಲಿನ ಈ ಪರ್ವತದಲ್ಲಿ ಕಂಡು ಬಂದಿರುವ ಗಿಡಮೂಲಿಕೆಗಳು ಬೇರಾವುದೇ ಸ್ಥಳಗಳಲ್ಲಿ ಇಂತಹ ಗಿಡಮೂಲಿಕೆಗಳು ಕಂಡು ಬರುವುದಿಲ್ಲ ಅನ್ನೋದು ಆಶ್ಚರ್ಯದ ಸಂಗತಿ!! ಆದರೆ ಶ್ರೀಲಂಕಾದಲ್ಲಿರುವ ಆ ಪರ್ವತದಲ್ಲಿ ಕಂಡುಬಂದಿರುವ ಔಷಧಿಯ ಗಿಡಮೂಲಿಕೆಗಳು ಕಂಡು ಬಂದಿರುವುದು ಕೇವಲ ಹಿಮಾಲಯದಲ್ಲಿ ಮಾತ್ರ!! ಹೌದು, ಯಾವಾಗ ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತು, ಹಾರಿ ಬಂದಾಗ ಅದೆಷ್ಟೋ ಔಷಧಿಯ ಗಿಡದ ಬೀಜಗಳು ಬೇರೆ ಬೇರೆ ಜಾಗದಲ್ಲಿ ಬೀಳುತ್ತಾ ಹಲವು ಜಾಗದಲ್ಲಿ ಕೆಲವೊಂದು ಔಷಧಿಯ ಸಸ್ಯಗಳು ಬೆಳೆದವು.
ದೇಶದ ಜನರಿಗೆ ರೋಗದಿಂದ ಮುಕ್ತಿಸಿಗಲಿ ಎನ್ನುವ ಹನುಮಂತ ಮಾಡಿರುವ ಯೋಚನೆಯಿಂದ, ಕೆಲ ಔಷಧಿ ಸಸ್ಯಗಳು ನಮಗೆ ಸುಲಭವಾಗಿ ಸಿಗುವಂತಾಗಿದೆ. ಹೀಗಿರಬೇಕಾದರೆ, ಮಹಾಜ್ಞಾನಿಯಾದ ಹನುಮಂತನಿಗೆ ಕೇವಲ ಮರುಜೀವಗೊಳಿಸುವ ಔಷಧಿಯ ಸಸ್ಯ ಯಾವುದೆಂದು ಆತ ಗೊತ್ತಿರಲಿಲ್ಲವೇ?? ಗೊತ್ತಿದ್ದರೂ ಕೂಡ ಆತ ಈಡೀ ಸಂಜೀವಿನಿ ಪರ್ವತವನ್ನೇ ಹೊತ್ತು ತಂದ ಎಂದರೆ ಅದರ ಅರ್ಥ ಲೋಕೋದ್ಧಾರಕ್ಕೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಷ್ಟೇ!! ಇತ್ತೀಚೆಗೆ ಉತ್ತರಾಖಂಡ ಸರಕಾರವು ತನ್ನ ವಿಜ್ಞಾನಿಗಳನ್ನು ಬೆನ್ನಿಗೆ ಕಟ್ಟಿಕೊಂಡು 150 ಕೋಟಿ ರೂಪಾಯಿಗಳ ಸಂಶೋಧನಾ ಅನುದಾನಕ್ಕೆಂದು ಕೇಂದ್ರ ಸರಕಾರದ ಮುಂದೆ ಬೇಡಿಕೆ ಇಟ್ಟಿದೆ.
ವಾಸ್ತವದಲ್ಲಿ, ಕಳೆದ ಹಲವು ದಶಕಗಳಿಂದ ಸಂಜೀವಿನಿ ಹುಡುಕಾಟದ ಪ್ರಯತ್ನಗಳು ನಡೆಯುತ್ತಲೇ ಇವೆ. ಸೋಮರಸದ ತಯಾರಿಕೆಗೆ ಉಪಯೋಗಿಸಿರಬಹುದಾದ ಹಲವು ಸಸ್ಯಗಳನ್ನು ವಿಜ್ಞಾನಿಗಳು ಈಗಾಗಲೇ ಹುಡುಕಿ ತೆಗೆದಿದ್ದಾರೆ!! ಅಷ್ಟೇ ಅಲ್ಲದೇ, ಸೌಗಂಧಿಕಾ ಪುಷ್ಪದ ಬಗ್ಗೆಯೂ ಅವರಿಗೆ ಈಗಾಗಲೇ ಸೂಚನೆಗಳು ಸಿಕ್ಕಿವೆ. ರಾಮಾಯಣ ಕಾಲದಲ್ಲಿರಬಹುದಾಗಿದ್ದ ಬಹುಪಾಲು ಸಸ್ಯಗಳ ಬಗ್ಗೆಯೂ, ವಿಜ್ಞಾನಿಗಳು ತಮ್ಮ ಸಂಶೋಧನೆಯ ಮೂಲಕ ಬಲೆಬೀಸಿ ಹುಡುಕಿದ್ದಾರೆ. ಇತ್ತೀಚೆಗೆ ಸಂಜೀವಿನಿಯೂ ಕೂಡ ಅವರ ಹುಡುಕಾಟದ ಬಲೆಗೆ ಸಿಕ್ಕಿಹಾಕಿಕೊಂಡಿದೆ!!! ಮರುಜೀವ ಪಡೆಯಬಲ್ಲ ಸಸ್ಯಗಳಿಗೆ ಹುಡುಕಾಟ ನಡೆಸಿದಾಗ ವಿಜ್ಞಾನಿಗಳಿಗೆ ದೊರತದ್ದು ಕೇವಲ ಎರಡು!!!
ಆ ಪೈಕಿ ಒಂದು, “ಸಂಜೀವಿನಿ ಬೂಟಿ” ಎಂದು ಕರೆಯಲಾಗುವ ಗರಿಗಿಡ. ಸಸ್ಯಶಾಸ್ತ್ರಜ್ಞರು ಸೆಲಾಜಿನೆಲ್ಲ ಬ್ರೈಯೋಪ್ಟರಿಸ್ ಎಂದು ಕರೆಯುವ ಈ ಸಸ್ಯವು ಭಾರತದ ಹಲವು ಪರ್ವತ ಪ್ರದೇಶಗಳಲ್ಲಿ ದೊರೆಯುತ್ತದೆ. ಎರಡನೆಯದು, ಡೆಸ್ಮೋಟ್ರಿಕಿಯಮ್ ಫಿಂಬ್ರಿಯಾಟಮ್ ಎಂಬ ಶೀತಾಳೆ ಗಿಡ. ತನ್ನ ಬುಡದಲ್ಲಿ ನೀರನ್ನು ಹೀರಿ ಹಿಡಿದುಕೊಳ್ಳಬಲ್ಲ ಬುಡ್ಡೆಯನ್ನು ಹೊಂದಿರುವ ಈ ಶೀತಾಳೆ ಗಿಡವು ಸಹ ಭಾರತದ ಕೆಲ ಪರ್ವತ ಪ್ರದೇಶಗಳಲ್ಲಿ ದೊರೆಯುತ್ತಿದೆ!! ಒಟ್ಟಿನಲ್ಲಿ ರಾಮಾಯಣ ಮಹಾಭಾರತ ನಡೆದೇ ಇಲ್ಲ ಎಂದು ಹೇಳುವ ಅನೇಕರಿಗೆ ಈ ಮೂಲಕ ಉತ್ತರ ಸಿಗಲಿರುವುದಂತೂ ನಿಜ!

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು