Friday, September 20, 2024
ಸುದ್ದಿ

ಜಾಗ ದಾನ ಮಾಡಿ ಮಾನವೀಯತೆ ಮೆರೆದ ರವಿ ಕಕ್ಕೆ ಪದವು – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೇ ಸುಬ್ರಮಣ್ಯದ ಯುವ ಉದ್ಯಮಿಗಳು ಎಲ್ಲರಿಗು ಚಿರಪರಿಚಿತರು ಜೆಸಿ ಟೊಬಿಫ್ ರಾಷ್ಟೀಯ ಪ್ರಶಸ್ತಿ ಪುರಸ್ಕೃತ ರವಿ ಕಕ್ಕೆಪದವು.

ಕುಕ್ಕೇ ಸುಬ್ರಮಣ್ಯ ದಲ್ಲಿ ಮೊದಲು ಬಾಡಿಗೆ ಮನೆಯಲ್ಲಿ ಇದ್ದರು ತಾನು ಪಟ್ಟ ಕಷ್ಟವನ್ನು ಅರಿತು ನನ್ನ ಹಾಗೆ ಯಾರು ಕಷ್ಟ ಪಡಬಾರದು ಎಂಬ ಮುಗ್ಗದ ಮನಸಿನ ರವಿ ಕಕ್ಕೆ ಪದವು ರವರು ತನ್ನ ಉದ್ಯಮದಿನದ ಬಂದ ಹಣವನ್ನು ಸ್ವಲ್ಪ ಸ್ವಲ್ಪವೇ ಸಂಗ್ರಹಮಾಡಿ ಅದನ್ನ ದಾನ ರೂಪದಲ್ಲಿ ಬಡವರಿಗೆ, ವಾಸಕ್ಕೆ ಮನೆ ಇಲ್ಲದವರಿಗೆ, ದಾನ ಮಾಡಿಕೊಂಡು ಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕೂಲಿ ಕರ‍್ಮಿಕರಾದ ಸಂಪಾಜೆ ವಿಜಯ ಗೌಡರಿಗೆ ಮನೆ ನರ‍್ಮಿಸಲು ಮೂರೂ ಸೆಂಟ್ಸ್ ಜಾಗ ದಾನ ಮಾಡಿದ್ದಾರೆ. ಇಷ್ಟರ ವರೆಗೆ ರವಿ ಕಕ್ಕೆ ಪದವು ರವರು 11ನಿವೇಶನಗಳನ್ನೂ ದಾನಮಾಡಿ ಮನೆ ನರ‍್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ರವಿ ಕಕ್ಕೆ ಪದವು ರನ್ನು ನೂರಾರು ಪ್ರಶಸ್ತಿ ಪುರಸ್ಕಾರಗಳು ಅರಸಿಬಂದಿದೆ. 17/10/2018 ಈ ದಿನ ಸಂಪಾಜೆ ವಿಜಯ ಗೌಡರಿಗೆ ನಿವೇಶನಕ್ಕೆ ಜಾಗದ ಅಧಿಕಾರ ಪತ್ರವನ್ನು ಜೆಸಿವಲಯಾಧ್ಯಕ್ಷರಾದ ರಾಕೇಶ್ ಕುಂಜೂರು ಹಸ್ತಾಂತರ ಮಾಡಿದರು ಹಾಗು ಈ ಸಂರ‍್ಭದಲ್ಲಿ ಸುಬ್ರಮಣ್ಯ ಜೆಸಿ ಅಧ್ಯಕ್ಷ ಮೋನಪ್ಪ ಕೆ, ಜೆಸಿ ವಲಯಾಧಿಕಾರಿ ಶ್ರೀನಿವಾಸ್ ಐತಾಳ್, ಚಂದ್ರಶೇಖರ ಕುಲಕುಂದ, ಶ್ರೀಮತಿ ಸೌಮ್ಯ ಉಪಸ್ಥಿತರಿದ್ದರು.