Friday, September 20, 2024
ಸುದ್ದಿ

ಅಕ್ಟೋಬರ್ ನಲ್ಲಿ 4 ಮಂದಿ ಎಚ್1 ಎನ್1 ಸಾಂಕ್ರಾಮಿಕ ರೋಗದಿಂದ ಮೃತ್ಯು: ಡಾ.ರಾಮಕೃಷ್ಣ ರಾವ್ – ಕಹಳೆ ನ್ಯೂಸ್

ಮಂಗಳೂರು: ಅಕ್ಟೋಬರ್ ತಿಂಗಳೊಂದರಲ್ಲೇ 4 ಮಂದಿ ಎಚ್1 ಎನ್1 ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಸಜೀಪ ನಡು ನಿವಾಸಿಗಳಿಬ್ಬರು ಹಾಗೂ ವಾಮಂಜೂರು ಮತ್ತು ಉಳ್ಳಾಲ ನಿವಾಸಿಗಳಿಬ್ಬರು ಹೆಚ್ 1 ಎನ್ 1 ರೋಗದಿಂದ ಮೃಪಟ್ಟಿದ್ದಾರೆ ಎಂದು ದ.ಕ.ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ ರಾವ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಟ್ಟುಬಿಟ್ಟು ಸುರಿಯುವ ಮಳೆ, ತಂಪು ಹವೆಯ ವಾತಾವರಣ ಸಹಜವಾಗಿ ಸಾಂಕ್ರಾಮಿಕ ರೋಗಗಳನ್ನು ಸೃಷ್ಟಿಸುತ್ತದೆ. ನಿರಂತರ ಮಳೆ ಸುರಿಯುವ ಸಂದರ್ಭ, ಅಧಿಕ ತಾಪಮಾನದಲ್ಲಿ ವೈರಸ್ ಬೆಳೆಯಲು ಸಾಧ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು