Friday, September 20, 2024
ಸುದ್ದಿ

ಬೈಕ್ ತೊಳಯಲು ಹೋಗಿದ್ದ ಮೂವರು ಯುವಕರು ನೀರುಪಾಲು – ಕಹಳೆ ನ್ಯೂಸ್

ಚಿಕ್ಕಮಗಳೂರು: ಆಯುಧ ಪೂಜೆಯಂದು ಹುಲಿತಿಮ್ಮಾಪುರದಲ್ಲಿ ಸೂತಿಕ ಛಾಯೆ ಆವರಿಸಿಕೊಂಡಿದೆ.ದೇಶದಲ್ಲೆಡೆ ನವರಾತ್ರಿಯ ಸಂಭ್ರಮ ಮನೆ ಮಾಡಿದ್ದು, 9 ನೇ ದಿನದ ಆಯುಧ ಪೂಜೆಯ ಸಡಗರದಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರದಲ್ಲಿ ಕರಾಳ ಘಟನೆ ನಡೆದಿದೆ.

ಆಯುದ ಪೂಜೆಗೆ ಕೆರೆಯ ಸಮೀಪ ಬೈಕ್ ತೊಳಯಲು ಹೋಗಿದ್ದ ಮೂವರು ಯುವಕರು ಸಾವನಪ್ಪಿದ್ದಾರೆ.ಮೃತರು 18 ವರುಷದ ಹೇಮಂತ್ 21 ವರ್ಷದ ವಿಜಯ್ ಹಾಗೂ 14 ವರ್ಷದ ಶಿವರಾಜ್ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂವರಿಗೂ ಈಜು ಬರದ ಕಾರಣ ಕೆರೆಯಲ್ಲಿ ಬಿದ್ದವನನ್ನ ಎಳೆಯಲ ಹೋಗಿ ಇನ್ನಿಬ್ಬರ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.  ಹುಲಿತಿಮ್ಮಾಪರದ ಕಟ್ಟೆಕೆರೆಯಲ್ಲಿ ಬೆಳಗ್ಹೆ 7.30 ಕ್ಕೆ ಈ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಲಿಂಗದಹಳ್ಳಿ ಪೋಲೀಸರ ಭೇಟಿ ನೀಡಿದ್ದಾರೆ.

ಜಾಹೀರಾತು