ಜ.18 (ನಾಳೆ) ಕಲ್ಲಡ್ಕ ಕುದ್ರೆಬೆಟ್ಟಿನಲ್ಲಿ ಲೋಕಾರ್ಪಣೆಗೊಳ್ಳಲಿದೆ ಹೊಟೇಲ್ ಸಮುದ್ರ – ಕಹಳೆ ನ್ಯೂಸ್

ಕಲ್ಲಡ್ಕ : ಕಲ್ಲಡ್ಕ ಕುದ್ರೆಬೆಟ್ಟಿನಲ್ಲಿ ಜ.18(ನಾಳೆ)ರಂದು ಡಾ. ಪ್ರಮೋದ್ ಶೆಟ್ಟಿ, ಕೊಡ್ಯೇಲುಗುತ್ತು ಪ್ರವೀಣ್ ಶೆಟ್ಟಿ ಹಾಗೂ ಕಕ್ಕೆಮಜಲು ಕರುಣಾಕರ ಶೆಟ್ಟಿ ಅವರ ಮಾಲಕತ್ವದ ಹೊಟೇಲ್ ಸಮುದ್ರ ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ.
ಬೆಳಗ್ಗೆ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ ನಡೆದು, ಬಳಿಕ ಅನ್ನಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ “ಶ್ರೀದೇವಿ ಮಹಾತ್ಮೆ” ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
ವಿಶೇಷ ಸೂಚನೆ : ಜ.21ರಿಂದ ಗ್ರಾಹಕರ ಸೇವೆಗೆ ಲಭ್ಯ.