Friday, September 20, 2024
ಸುದ್ದಿ

ಉತ್ತರ ಪ್ರದೇಶದ ಕೃಷಿಕರ ಕಷ್ಟಕ್ಕೆ ಸ್ಪಂದಿಸಿದ ಅಮಿತಾಭ್ ಬಚ್ಚನ್ – ಕಹಳೆ ನ್ಯೂಸ್

ದೆಹಲಿ: ಬಾಲಿವುಡ್‌ನ ಐಕಾನ್ ನಟ ಅಮಿತಾಭ್ ಬಚ್ಚನ್ ಇದೀಗ ಸಮಾಜ ಸೇವೆಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಉತ್ತರಪ್ರದೇಶದ ರೈತರ ಸಾಲ ಮರು ಪಾವತಿಸಲು ಮುಂದಾಗಿದ್ದಾರೆ.

ಸಾಲದಿಂದ ಬೇಸತ್ತಿರುವ 850 ರೈತರ ಸಾಲವನ್ನು ಅಮಿತಾಬ್ ತೀರಿಸುವ ಹೊಣೆ ಹೊತ್ತಿದ್ದು, ಇನ್ನು ಅಮಿತಾಬ್ ತೀರಿಸಲು ಮುಂದಾಗಿರುವ ರೈತರ ಸಾಲದ ಮೊತ್ತ ಅಂದಾಜು 5.5 ಕೋಟಿ ರೂಪಾಯಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಬಂಧ ಈಗಾಗಲೇ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲು ಬಿಗ್ ಬಿ ನಿರ್ಧರಿಸಿದ್ದು,. ಇದಕ್ಕೂ ಮೊದಲು ಮಹಾರಾಷ್ಟ್ರದ 350 ರೈತರ ಸಾಲ ತೀರಿಸಿದ್ದ ಅಮಿತಾಬ್ ಬಚ್ಚನ್ ಇದೀಗ ಉತ್ತರ ಪ್ರದೇಶದ ಕೃಷಿಕರ ಕಷ್ಟಕ್ಕೂ ಸ್ಪಂದಿಸಿದ್ದಾರೆ.

ಜಾಹೀರಾತು