Friday, September 20, 2024
ಸುದ್ದಿ

ಪುತ್ತೂರಿನಲ್ಲಿ ನಡೆದ ರಾಷ್ಟ್ರೀಯ ಹಿಂದೂ ಆಂದೊಲನದಲ್ಲಿ ಒಕ್ಕೊರಳಿನ ಒತ್ತಾಯ – ಕಹಳೆ ನ್ಯೂಸ್

ಪುತ್ತೂರು: ಕೊಟ್ಯಾಂತರ ಹಿಂದೂಗಳ ಶ್ರದ್ಧಾಕೇಂದ್ರವಾದ ಶಬರಿಮಲೆಯ ಪರಂಪರೆಗೆ ಸರ್ವೋಚ್ಚ ನ್ಯಾಯಾಲಯದ ಮಹಿಳೆಯರ ಪ್ರವೇಶದ ತೀರ್ಪಿನಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಗಿದೆ. ಧಾರ್ಮಿಕ ವಿಷಯಗಳ ತೀರ್ಪು ನೀಡುವಾಗ ಶಬರಿಮಲೆ ದೇವಸ್ಥಾನದ ತಂತ್ರಿಗಳ, ರಾಜಮನೆತನ ಮತ್ತು ಹಿಂದೂ ಧರ್ಮಚಾರ್ಯರ ಅಬಿಪ್ರಾಯ ಪಡೆಯದಿರುವುದು ದುರದೃಷ್ಟಕರವಾಗಿದೆ.

ಇಂದು ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಪರಂಪರೆಯನ್ನು ಭಗ್ನ ಮಾಡುವ ಷಡ್ಯಂತ್ರ್ಯವು ನಡೆಯುತ್ತಿದೆ. ಕೆಲವು ನಾಸ್ತಿಕರ ಸ್ವಾರ್ಥಕ್ಕೆ ಲಕ್ಷಾಂತರ ಮಹಿಳೆಯ ಧಾರ್ಮಿಕ ಶ್ರದ್ಧೆಯನ್ನು ಬಲಿಪಶು ಮಾಡುವುದು ಎಷ್ಟು ಸರಿ?. ಕೇರಳದ ಸಾಮ್ಯವಾದಿ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ನಿರ್ಣಯವನ್ನು ಆತುರದಿಂದ ಪಾಲಿಸಲು ೫೦೦ ಮಹಿಳಾ ಪೋಲಿಸರನ್ನು ಶಬರಿಮಲೆಯಲ್ಲಿ ನೇಮಕ ಮಾಡಿರುವುದು ಖಂಡನೀಯವಾಗಿದೆ.
ಕೇರಳ ಸರ್ಕಾರ ಜಲ್ಲಿಕಟ್ಟು ವಿಷಯದಲ್ಲಿ ಸುಗ್ರಿವಾಜ್ಞೆ ಹೊರಡಿಸಿದಂತೆ ಶಬರಿಮಲೆ ದೇವಸ್ಥಾನದ ಪರಂಪರೆಯನ್ನು ಕಾಪಾಡಲು, ಮೊದಲಿನಂತೆ ಯಥಾವತ್ತಾಗಿ ನಡೆಸಿಕೊಂಡು ಬರಲು ಕೂಡಲೇ ಸುಗ್ರಿವಾಜ್ಞೆಯನ್ನು ಹೊರಡಿಸಬೇಕು. ಇಲ್ಲವಾದರೇ ತೀವ್ರ ವಿರೋಧವನ್ನು ಎದುರಿಸಬೇಕಾದೀತು ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಕರುಣಾಕರ ಅಭ್ಯಂಕರ್ ಉಜಿರೆ ಇವರು ಹೇಳಿದರು. ಅವರು ಪುತ್ತೂರಿನ ಬಸ್ ನಿಲ್ದಾಣದ ಬಳಿಯಿರುವ ಗಾಂಧಿಕಟ್ಟೆ ಮುಂಭಾಗದಲ್ಲಿ ನಡೆದ ರಾಷ್ಟ್ರೀಯ ಹಿಂದೂ ಆಂದೋಲನದಲ್ಲಿ ಮಾತನಾಡುತ್ತಿದ್ದರು.
ಹಿಂದುತ್ವವಾದಿಗಳಾದ ಶ್ರೀ. ಮನ್ಮಥ ಶೆಟ್ಟಿ ಮಾತನಾಡಿ, ’ಶಬರಿಮಲೆಗೆ ಹಿಂದೂ ಸ್ತ್ರೀಯರು ಹೋಗುವುದಿಲ್ಲ ಏಕೆಂದರೆ ಅವರಿಗೆ ಶಬರಿಮಲೆಯ ಕಾರಣಿಕ ಮತ್ತು ಸಂಪ್ರದಾಯದ ಮೇಲೆ ನಂಬಿಕೆ ಇದೆ. ಆದರೆ ಅನ್ಯ ಧರ್ಮದ ಸ್ತ್ರೀಯರು ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ ಮಾಡುವ ಸಾಹಸಕ್ಕೆ ಹೋಗುವುದು ಆಪತ್ತಿನ ಮುನ್ಸೂಚನೆಯೇ ಆಗಿದೆ. ನಾಳೆ ಅನ್ಯ ಧರ್ಮಿಯರು ಇತರ ಹಿಂದೂ ದೇವಾಲಯಕ್ಕೂ ಪ್ರವೇಶ  ಮಾಡಬಹುದು, ಶಬರಿಮಲೆಗೆ ೮೦೦ ವರ್ಷ ಇತಿಹಾಸ ಇರುವ ಪರಂಪರೆಯ ರಕ್ಷಣೆಗಾಗಿ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಮರುಪರಿಶಿಲನೆ ಮಾಡಬೇಕು.’ ಎಂದರು.
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಮೈಸೂರಿನ ಅಬಿದ್ ಪಾಶಾ ಮತ್ತು ಅವನ ಗುಂಪು ಆರ್‌ಎಸ್‌ಎಸ್ ಮತ್ತು ಭಾಜಪದ  ೮ ಹಿಂದುತ್ವನಿಷ್ಠ ಕಾರ್ಯಕರ್ತರನ್ನು ಹತ್ಯೆ ಮಾಡಿರುವುದಾಗಿ ವಿಚಾರಣೆಯ ಸಮಯದಲ್ಲಿ ತಿಳಿದುಬಂದಿದೆ.  ಆದರೂ ಕರ್ನಾಟಕದ ಇಂದಿನ ಕಾಂಗ್ರೆಸ್- ಜನತಾದಳ(ಜಾತ್ಯಾತೀತ) ಸಂಯುಕ್ತ ಸರಕಾರವು ಈ ಆರೋಪಿಗಳಿಗೆ ಸಹಾಯ ಮಾಡುತ್ತಿದೆ. ಹಿಂದೂಗಳ ಮೇಲೆ ತಕ್ಷಣವೇ ‘ಕೋಕಾ’ನುಸಾರ ಕ್ರಮ ಕೈಕೊಳ್ಳ್ಳುವ ಸರಕಾರವು ಈ ಗುಂಪಿನ ಮೇಲೆ ಇದುವರೆಗೂ ‘ಕೋಕಾ’ (ಕರ್ನಾಟಕ ಗುಂಪು ಅಪರಾಧ ನಿಯಂತ್ರಣ ಕಾನೂನು) ಜಾರಿಗೊಳಿಸಿಲ್ಲ. ಈ ಗುಂಪು ನಡೆಸುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ದೇಶದ್ರೋಹಿ ಸಂಘಟನೆಯನ್ನು ಶೀಘ್ರವಾಗಿ ನಿಷೇಧಿಸಬೇಕೆಂದು ಆಗ್ರಹಿಸುತ್ತೇವೆ.
ಕಳೆದ ಕೆಲವು ದಿನಗಳಿಂದ ವಿವಿಧ ಚರ್ಚಗಳು ಮತ್ತು ಮಿಶನರಿ ಸಂಸ್ಥೆಗಳಲ್ಲಿ ಲೈಂಗಿಕ ಶೋಷಣೆ, ಬಲಾತ್ಕಾರ, ಶಿಶು ಮಾರಾಟ ಇತ್ಯಾದಿ ಅವ್ಯವಹಾರಗಳು ಸತತವಾಗಿ ನಡೆಯುತ್ತಿವೆ. ಕೇರಳದ ಚರ್ಚಿನಲ್ಲಿ ಒಬ್ಬ ನನ್ ಮೇಲೆ ಬಿಶಪ್ ಫ್ರಂಕೋ ಮುಲಕ್ಕಲ ಇವರು ೧೩ ಬಾರಿ ಬಲಾತ್ಕಾರ ಮಾಡಿರುವುದು  ಬಹಿರಂಗವಾಗಿದೆ, ಇದು ಬಹಿರಂಗಗೊಂಡಿರುವ ಕೇವಲ ಒಂದು ಪ್ರಕರಣವಾಗಿದ್ದು ದೇಶಾದ್ಯಂತ ಇಂತಹ ಅನೇಕ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ಚರ್ಚಗಳು ಮತ್ತು ಮಿಶನರಿ ಸಂಸ್ಥೆಗಳ ತಪಾಸಣೆಯನ್ನು ನಡೆಸಲು ಒಂದು ವಿಶೇಷ ಆಯೋಗವನ್ನು ರಚಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.
ಆಂದೋಲನದಲ್ಲಿ ಕೈಗೊಳ್ಳಲಾಗಿರುವ ಇತರೆ ಒಮ್ಮುಖ ಬೇಡಿಕೆಗಳು:
೧. ರೇಲ್ವೆ ಇಲಾಖೆಯು ಪ್ರಯಾಗ ಕುಂಭಮೇಳದಲ್ಲಿ ಭಾಗವಹಿಸುವ ಭಾವಿಕರ ಮೇಲೆ, ರೇಲ್ವೆ ಟಿಕೇಟ ದರವನ್ನು ಹೆಚ್ಚಿಸಲು ನಿರ್ಣಯಿಸಿದೆ. ಈ ನಿರ್ಣಯದಿಂದ ಹಿಂದೂಗಳ ಮೇಲೆ ಅನ್ಯಾಯವಾಗುತ್ತಿದ್ದು, ಇದನ್ನು ತಕ್ಷಣವೇ ರದ್ದುಗೊಳಿಸಬೇಕು.
೨.ಅನೈತಿಕ ಮತ್ತು ಅವ್ಯವಹಾರಗಳಾದ ಇಸ್ಪೀಟು, ಅಮಲು ಪದಾರ್ಥಗಳು, ಮಾನವ ಕಳ್ಳ ಸಾಗಾಣಿಕೆ ಇತ್ಯಾದಿ ಅನೇಕ ವಿಷಯಗಳನ್ನು ನಿರ್ಬಂಧಿಸಲು ‘ಆನ್ ಲೈನ್’ ವೇಶ್ಯೆಯರ ವ್ಯವಹಾರವನ್ನು ನಡೆಸುವ ವೆಬ್ ಸೈಟ್ ಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಲಾಯಿತು.
ಶಂಖನಾದದೊಂದಿಗೆ ಪ್ರತಿಭಟನೆಯನ್ನು ಆರಂಭಿಸಲಾಯಿತು. ಸೌ. ವಂದನಾ ಶೆಣೈ ಪ್ರಾರ್ಥನೆ ಮಾಡಿದರು, ಕು. ಚೇತನಾ ಪ್ರಭು ಸ್ವಾಗತಿಸಿ ವಂದಿಸಿದರು.
ಪ್ರತಿಭಟನೆಯ ನಂತರ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಮಾನ್ಯ ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರ ಗೃಹಸಚಿವರಿಗೆ ಮನವಿ ನೀಡಲಾಯಿತು.
ಪ್ರತಿಭಟನೆಯ ಸಂದರ್ಭದಲ್ಲಿ ಹಿಂದುತ್ವವಾದಿಗಳಾದ ಶ್ರೀ. ಹರಿಪ್ರಸಾದ್ ಶೆಟ್ಟಿ, ಶ್ರೀ. ಸೀತರಾಮ ಆಳ್ವ, ಪ್ರಕಾಶ್ ಆಚಾರ್ಯ, ಸತೀಶ್ ಭಂಡಾರಿ, ಸಂತೋಷ್, ಮಾಜಿ ಪುರಸಭೆ ಅಧ್ಯಕ್ಷರಾದ ಶ್ರೀ. ರಾಜೇಶ್ ಬನ್ನೂರು, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ದಯಾನಂದ ಹೆಗ್ಡೆ, ಶ್ರೀ. ಜನಾರ್ದನ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು