Recent Posts

Saturday, September 21, 2024
ದಕ್ಷಿಣ ಕನ್ನಡಸುದ್ದಿ

ಕಲ್ಲಡ್ಕ : ರಾಷ್ಟ್ರೀಯ ವಿಜ್ಞಾನ ದಿನಾಚರಣೆ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ ಸರ್.ಸಿ.ರಾಮನ್‌ರವರ ‘ರಾಮನ್ ಪರಿಣಾಮ’ ಆವಿಷ್ಕಾರದ ಸ್ಮರಣಾರ್ಥವಾಗಿ ಆಚರಿಸುವ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ”ಯನ್ನು ಇಂದು (29)ಆಚರಿಸಲಾಯಿತು.


ಮುಖ್ಯಅತಿಥಿಯಾಗಿ ಆಗಮಿಸಿದ, ಪದ್ಮಶ್ರೀ ಪುರಸ್ಕೃತ ವಿವಿಧ ಭತ್ತ ತಳಿ ಸಂರಕ್ಷಕರಾದ, ಸತ್ಯನಾರಾಯಣ ಬೆಳೇರಿ ಕಾಸರಗೋಡು ಮಾತನಾಡುತ್ತಾ, “ಶಾಲೆಗೆ ಮೊದಲ ಬಾರಿಗೆ ಭೇಟಿ ನೀಡುತ್ತಿರುವೆ, ‘ವಿದ್ಯಾದೇಗುಲ’ವೆಂದರೆ ಶ್ರೀರಾಮ ಶಾಲೆ. ಎಲ್ಲಾ ಬೆಳವಣಿಗೆಗೆ ಪೂರಕವಾದ ವಾತಾವರಣಇಲ್ಲಿದೆ.ಇಲ್ಲಿನ ವಿದ್ಯಾರ್ಥಿಗಳು ಜೀವನದಲ್ಲಿಎಂದೂ ಸೋಲನ್ನುಕಾಣಲು ಸಾಧ್ಯವಿಲ್ಲ. ನಾನು ಮಾಡಿರುವ ಈ ಕೆಲಸ, ಉಳಿಸಿ, ಬೆಳೆಸುವ ಭರವಸೆನಿಮ್ಮ ಮೂಲಕಇಲ್ಲಿ ಮೂಡಿದೆ.ರೇಡಿಯೋ, ಪತ್ರಿಕೆ ಮಾಧ್ಯಮಗಳು ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಕೇವಲ ಓದುವಿಕೆ, ಕೇಳುವಿಕೆಯಿಂದ ಪೂರಕವಾದ ಮಾಹಿತಿಯನ್ನು ಕಲೆ ಹಾಕಿ ಈ ಭತ್ತದ ತಳಿ ಸಂರಕ್ಷಣೆಯನ್ನು ಮಾಡಿದ್ದೇನೆ. ಅದೇರೀತಿ ಪಠ್ಯದ ಹೊರತಾಗಿ ನಿಮಗೆ ಆಸಕ್ತಿದಾಯವಾದಚಟುವಟಿಕೆಯಲ್ಲಿ ನಿಮ್ಮನ್ನು ನೀವು ನಿರಂತರವಾಗಿ ತೊಡಗಿಸಿಕೊಳ್ಳಿ.ಇಂದು ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆದೊರೆಯುತ್ತಿಲ್ಲ. ಇಂದಿನ ವ್ಯವಸ್ಥೆಯಿಂದಾಗಿಕೃಷಿಯಲ್ಲಿಯಾರೂ ಮುಂದೆ ಬರುತ್ತಿಲ್ಲ. ಆದರೆ ಈ ಸಂಸ್ಥೆಯಿAದ ಹೊರಬರುವ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಸಾಧಿಸುವುದುಕಷ್ಟವಿಲ್ಲ. ಆ ರೀತಿಯ ವಾತಾವರಣವನ್ನು ಈ ಸಂಸ್ಥೆ ಕಲ್ಪಿಸಿದೆ.ಇದಕ್ಕೆ ಮುಖ್ಯವಾಗಿ ಬೇಕಾದುದು ಸರ್ಕಾರ ಗಮನಿಸುವಿಕೆ.ಈ ಕೃಷಿಯನ್ನು ಪಠ್ಯದ ಭಾಗವಾಗಿತರಬೇಕು.ಅದರಲ್ಲಿ ಸಿಲಬಸ್ ತರುವುದು, ಅದಕ್ಕಾಗಿ ಅಂಕ ನೀಡುವ ವ್ಯವಸ್ಥೆತಂದರೆ ಮಕ್ಕಳು ಸಹಜವಾಗಿಕೃಷಿಯತ್ತ ಒಲವು ತೋರಿಸುವ ಸಾಧ್ಯತೆಇದೆ.ಶ್ರೀರಾಮ ವಿದ್ಯಾಕೇಂದ್ರದAತಹ ಶಿಕ್ಷಣ ಸಂಸ್ಥೆಗಳು ತನ್ನಿಂತಾನೆಅದನ್ನೆಲ್ಲ ಮಾಡುತ್ತದೆಎನ್ನುವುದಕ್ಕೆ ಸಂಶಯವಿಲ್ಲ.ಆದರೆಕರ್ನಾಟಕದಎಲ್ಲಾ ಶಾಲೆಯ ಮಕ್ಕಳಿಗೂ ಇಂತಹ ವ್ಯವಸ್ಥೆದೊರೆಯುವಲ್ಲಿ ಸರಕಾರಗಮನಹರಿಸಬೇಕು.ಉನ್ನತ ಶಿಕ್ಷಣ ಮಾಡಿ ಕೃಷಿಗೆ ಬಂದರೆಇನ್ನಷ್ಟೂ ಸಾಧನೆ ಮಾಡಲುಅವಕಾಶವಿದೆ.ಕೃಷಿಯನ್ನು ಬಿಟ್ಟುಯಾರಿಗೂಜೀವನ ನಡೆಸಲು ಸಾಧ್ಯವಿಲ್ಲ. ಕೃಷಿ ಒಂದುಅನ್ನದ ಭಾಗ.ಅದನ್ನು ಬೆಳೆದೇ ತಿನ್ನಬೇಕೆ ಹೊರತು ಹಾಗೆ ತಿನ್ನಲು ಸಾಧ್ಯವಿಲ್ಲ.”ಎಂದುತಮ್ಮಕೃಷಿಯಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡರು.
ಕಾರ್ಯಕ್ರಮದ ಮೊದಲಿಗೆ ಅತಿಥಿ ಅಭ್ಯಾಗತರು ವಿದ್ಯಾಕೇಂದ್ರದಚಟುವಟಿಕೆಯನ್ನು ವೀಕ್ಷಿಸಿ, ಭಾರತಮಾತೆಗೆ ದೀಪಪ್ರಜ್ವಲನೆ ಮಾಡಿ, ನಂತರ ಸರ್.ಸಿ.ರಾಮನ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಕಾರವಾರದ ಕೈಗಾ ಅಣುವಿದ್ಯುತ್ ಸ್ಥಾವರದ ನಿವೃತ್ತತಾಂತ್ರಿಕ ಸಹಾಯಕ ದಿವಾಕರ ಪಡೀಲ್ – ಶ್ಯಾಮಲ ದಿವಾಕರ್ ದಂಪತಿಗಳು ಅಗ್ನಿಹೋತ್ರಕ್ಕೆಘೃತಾಹುತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಕೇಂದ್ರ ಇಂಧನ ಸಚಿವಾಲಯದಯಂಗ್‌ಚೇAಜ್ ಮೇಕರ್ ಪ್ರಶಸ್ತಿ, ಡೆಕ್ಕನ್ ಹೆರಾಲ್ಡ್ಚೇಂಜ್ ಮೇಕರ್ ಪ್ರಶಸ್ತಿ ಪುರಸ್ಕೃತ, ಸರ್ವಜ್ಞಎಜುಕೆಶನ್ ಪ್ರೆöÊ.ಲಿ. ಸಂಸ್ಥಾಪಕರಾದ ಶ್ರೀನಿಧಿ ಆರ್.ಎಸ್. ಕೊಳಕೀರು, ಭತ್ತದ ಪೈರನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಸಂಘದ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದರು.ಸಂವಾದದಲ್ಲಿ ವಿದ್ಯಾರ್ಥಿಗಳು ಹಲವಾರು ಪ್ರಶ್ನೆಗಳನ್ನು ಕೇಳಿದರು.ಶಾಲಾ ಕೃಷಿ ಮಂತ್ರಿಯಾದ ಸಂಜಯ್ ಮಾತನಾಡಿ, “ಸತ್ಯನಾರಾಯಣ ಬೆಳೇರಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ.ಈಗಾಗಲೇ ನನ್ನ ಬಿಡುವಿನ ಅವಧಿಯಲ್ಲಿ ಮನೆಯ ಹೈನುಗಾರಿಕೆಯಲ್ಲಿಕೈಜೋಡಿಸುತ್ತಿದ್ದು, ಇವರಕಾರ್ಯದಿಂದಾಗಿ ಮುಂದಿನ ದಿನಗಳಲ್ಲಿ ಮನೆಯ ಕೃಷಿ ಭೂಮಿಯಲ್ಲಿ ನನಗೂ ಭತ್ತ ಬೆಳೆಯುವ ಆಸಕ್ತಿ ಮೂಡಿದೆ.’ಎಂದುತನ್ನಅಭಿಪ್ರಾಯ ಹಂಚಿಕೊoಡರು.

ಜಾಹೀರಾತು

ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಿಗೆ ಅಧ್ಯಾಪಕ ವೃಂದದವರುಆರತಿ ಬೆಳಗಿ, ತಿಲಕವಿಟ್ಟರು, ಶಾಲಾ ಸಂಸ್ಥಾಪಕರಾದಡಾ| ಪ್ರಭಾಕರ್ ಭಟ್‌ಕಲ್ಲಡ್ಕಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಕಾರ್ಯಕ್ರಮದಕೊನೆಯಲ್ಲಿಅಧ್ಯಾಪಕರ ಮಾರ್ಗದರ್ಶನದಲ್ಲಿ ವಿಜ್ಞಾನ ಸಂಘದ ವಿದ್ಯಾರ್ಥಿಗಳಿಂದ ತಯಾರಾದ ‘ಚಂದ್ರಯಾನ 3’ ರ ಮಾದರಿಯಉಡಾವಣೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷಡಾ| ಪ್ರಭಾಕರ್ ಭಟ್‌ಕಲ್ಲಡ್ಕ ಸ್ವಿಚ್ ಆನ್ ಮಾಡುವ ಮೂಲಕ ವಿಜ್ಞಾನ ಮಾದರಿ ಪ್ರದರ್ಶಿನಿಗೆ ಚಾಲನೆ ನೀಡಿದರು.

ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ-ಗಣಿತ ಮಾದರಿಯನ್ನು ಪ್ರದರ್ಶಿಸಿದರು.ನಂತರಅತಿಥಿಗಣ್ಯರುವೀಕ್ಷಿಸಿ ವಿವರಣೆಯನ್ನು ಪಡೆದರು.
ಕಾರ್ಯಕ್ರಮದ ವೇದಿಕೆಯಲ್ಲಿಕೇಂದ್ರಇAಧನ ಸಚಿವಾಲಯದಯಂಗ್‌ಚೇAಜ್ ಮೇಕರ್ ಪ್ರಶಸ್ತಿ, ಡೆಕ್ಕನ್ ಹೆರಾಲ್ಡ್ಚೇಂಜ್ ಮೇಕರ್ ಪ್ರಶಸ್ತಿ ಪುರಸ್ಕೃತ, ಸರ್ವಜ್ಞಎಜುಕೆಶನ್ ಪ್ರೆöÊ.ಲಿ. ಸಂಸ್ಥಾಪಕ ಶ್ರೀನಿಧಿ ಆರ್.ಎಸ್. ಕೊಳಕೀರು , ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷಡಾ| ಪ್ರಭಾಕರ್ ಭಟ್‌ಕಲ್ಲಡ್ಕ, ಕಾರವಾರದ ಕೈಗಾ ಅಣುವಿದ್ಯುತ್ ಸ್ಥಾವರದ ನಿವೃತ್ತತಾಂತ್ರಿಕ ಸಹಾಯಕ ದಿವಾಕರ ಪಡೀಲ್ – ಶ್ಯಾಮಲ ದಿವಾಕರ್ ದಂಪತಿಗಳು, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್‌ಎನ್, ಆಡಳಿತ ಮಂಡಳಿಯ ಸದಸ್ಯೆ ಮಲ್ಲಿಕಾಆರ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯರವಿರಾಜ್‌ಕಣಂತೂರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನುವಿದ್ಯಾರ್ಥಿನಿಯರಾದ ಸುಶ್ಮಿತಾ ಭಟ್ ನಿರೂಪಿಸಿ, ವೈಷ್ಣವಿ ಕಡ್ಯ ಸ್ವಾಗತಿಸಿ, ಚಿರಸ್ವಿ ವಂದಿಸಿದರು.