ಬಂಟ್ವಾಳ: ಜಿ.ಎಚ್.ಎಮ್ ಫೌಂಡೇಶನ್ ಮುಲಾರಪಟ್ನ ಇವರ ವತಿಯಿಂದ ನೂತನ ಮನೆಯ ಹಸ್ತಾಂತರ, ಕಚೇರಿ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಸಹಾಯ ಧನ ವಿತರಣಾ ಕಾರ್ಯಕ್ರಮ ಮಾರ್ಗದಂಗಡಿ ಎಂಬಲ್ಲಿ ನಡೆಯಿತು.
ಫೌಂಡೇಶನ್ ವತಿಯಿಂದ ಸುಮಾರು ಏಳು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆಯನ್ನು ಜಿಲ್ಲಾ ಖಾಝಿ ಬಹು! ಶೈಖುನಾ ತ್ವಾಕಾ ಆಹಮ್ಮದ್ ಮುಸ್ಲಿಯಾರ್ ಫಲಾನುಭವಿಗೆ ಕೀ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ದೀನದಲಿತರಿಗೆ, ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡುವ ಇಂತಹ ಸಂಘಟನೆಗಳ ಯುವಕರಿಗೆ ಭಗವಂತನ ಅನುಗ್ರಹವಿದೆ ಎಂದರು.