Friday, September 20, 2024
ಸುದ್ದಿ

ಏರ್‌ಇಂಡಿಯಾ ವಿಮಾನದಲ್ಲಿ ತಿಗಣೆ: ಪ್ರಯಾಣಿಕನ ದೂರು – ಕಹಳೆ ನ್ಯೂಸ್

ಬೆಂಗಳೂರು: ಮುಂಬೈನಿಂದ ಬೆಂಗಳೂರಿಗೆ ಕಳೆದ ವಾರ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬರು, ವಿಮಾನದಲ್ಲಿ ತಿಗಣೆ ಕಚ್ಚಿದ ಬಗ್ಗೆ ದೂರು ನೀಡಿದ್ದಾರೆ.

ಘಟನೆ ನಡೆದು ವಾರವೇ ಕಳೆದ್ರೂ ಇನ್ನೂ ಈ ಸುದ್ದಿ ಮಾಧ್ಯಮದ ಕಣ್ಣಿಗೆ ಬಿದ್ದಿದ್ದ ಮಾತ್ರ ಇಂದು.ಬಹುಶಃ ದೇಶೀಯ ಪ್ರಯಾಣಿಕರು ವಿಮಾನದಲ್ಲಿ ತಿಗಣೆ ಕಾಟದ ಬಗ್ಗೆ ದೂರು ನೀಡಿದ್ದು ಇದೇ ಮೊದಲು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಜುಲೈನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಏರ್ ಇಂಡಿಯಾದ ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕರು ನ್ಯೂಯಾರ್ಕ್- ಮುಂಬೈ ವಿಮಾನದಲ್ಲಿ ತಿಗಣೆ ಕಚ್ಚಿದ ಬಗ್ಗೆ ದೂರು ನೀಡಿದ್ದರು.

ಜಾಹೀರಾತು

ವಿಮಾನಯಾನದುದ್ದಕ್ಕೂ ತುರಿಕೆ ಹಾಗೂ ಕೆರೆತ ಉಂಟಾಯಿತು. ಸೊಳ್ಳೆಗಳು ಇದ್ದಿರಬೇಕು ಎಂದು ಶಂಕಿಸಿದೆ. ಆದರೆ ಮನೆಗೆ ಹೋಗಿ ಅಂಗಿ ತೆಗೆದು ನೋಡುವವರೆಗೂ ತಿಗಣೆ ಕಚ್ಚಿದ್ದು ಎನ್ನುವುದು ಗಮನಕ್ಕೆ ಬರಲಿಲ್ಲ” ಎಂದು ರವಿಕುಮಾರ್ ದೂರಿದ್ದಾರೆ.