Friday, September 20, 2024
ಸುದ್ದಿ

ಬಾಲಿವುಡ್ ಸಿನಿಮೋದ್ಯಮ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಭೇಟಿ ಮಾಡಿದ ಬಾಲಿವುಡ್ ನಟರು – ಕಹಳೆ ನ್ಯೂಸ್

ದೆಹಲಿ: ಭಾರತದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡುತ್ತಿರುವ ಬಾಲಿವುಡ್ ಸಿನಿಮೋದ್ಯಮ ಒಂದಲ್ಲಾ ಒಂದು ಸಮಸ್ಯೆಗಳಿಂದ ಬಳಲುತ್ತಿದ್ದು, ಇದರ ಪರಿಹಾರಕ್ಕೆ ಮಾರ್ಗೋಪಾಯ ಅರಸಿ ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಸಹಿತ ಕೆಲ ನಿರ್ಮಾಪಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಬಾಲಿವುಡ್ ನಿರ್ಮಾಪಕರಾದ ರಿತೇಷ್ ಸಿದ್ವಾನಿ, ರಾಜ್ ಕುಮಾರ್ ಹಿರಾನಿ, ಸಿದ್ಧಾರ್ಥ್ ರಾಯ್ ಕಪೂರ್, ಆನಂದ ಎಲ್. ರೈ ಮತ್ತು ಮಹಾವೀರ್ ಜೈನ್, ನಟ ಆಮೀರ್ ಖಾನ್ ನೇತೃತ್ವದಲ್ಲಿ ನಿಯೋಗ ತೆರಳಿ, ಪ್ರಧಾನಿಯವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ಹಲವು ಸಮಸ್ಯೆಗಳನ್ನು ಪ್ರಧಾನಿಯವರ ಗಮನ ಸೆಳೆದ ನಿಯೋಗವು ಪರಿಹಾರಕ್ಕೆ ಸಮಿತಿಯೊಂದನ್ನು ರಚಿಸುವಂತೆ ಮನವಿ ಮಾಡಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪ್ರಧಾನಿ ಮೋದಿ ಸಮಿತಿ ರಚಿಸುವ ಭರವಸೆ ನೀಡಿದ್ದಾರೆನ್ನಲಾಗಿದೆ.

ಜಾಹೀರಾತು