Friday, September 20, 2024
ಸುದ್ದಿ

ಕಾಂಗ್ರೆಸ್, ಜೆಡಿಎಸ್ ನಾಯಕರು ಒಂದೇ ವೇದಿಕೆಯಲ್ಲಿ ಒಗ್ಗಟ್ಟು ಪ್ರದರ್ಶನ – ಕಹಳೆ ನ್ಯೂಸ್

ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ನಾನೊಂದು ತೀರ ನೀನೊಂದು ತೀರ ಎನ್ನುವ ಹಾಗೆ ಮುಖ ಮೂತಿ ತಿರುಗಿಸಿ ಹೋಗುತ್ತಿದ್ದ ಕಾಂಗ್ರೆಸ್, ಜೆಡಿಎಸ್ ನಾಯಕರು ಒಂದೇ ವೇದಿಕೆಯಲ್ಲಿ ಕುಳಿತು, ಒಗ್ಗಟ್ಟು ಪ್ರದರ್ಶನ ಮಾಡಿ, ನಾವೆಲ್ಲರೂ ಒಂದೇ, ಮೈತ್ರಿ ಪಕ್ಷದ ಅಭ್ಯರ್ಥಿ ಗೆಲ್ಲಿಸೋದು ಅಷ್ಟೇ ನಮ್ಮ ಮುಂದಿನ ಗುರಿ ಎಂದಿದ್ದಾರೆ.

ಹೌದು ಸಿದ್ದರಾಮಯ್ಯ ಗೌಪ್ಯವಾಗಿ ಸಭೆ ನಡೆಸಿ ಹೇಳಿರುವ ಮಾತುಗಳು, ಜೆಡಿಎಸ್ ನಾಯಕರ ವಿರುದ್ಧ ಕುದಿಯುತ್ತಿದ್ದ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರ ಸ್ವಾಮಿ ಅವರನ್ನು ಸಮಾಧಾನ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಎದುರಾಗಿರುವ ಪ್ರಶ್ನೆ ಅಂದ್ರೆ ನಾಗಮಂಗಲದಲ್ಲಿ ಸೋಲಿನ ಸುಳಿಗೆ ಸಿಲುಕಿ ಕಂಗಾಲಾಗಿರುವ ಚಲುವರಾಯಸ್ವಾಮಿ, ಶಿವರಾಮೇಗೌಡರನ್ನು ಗೆಲ್ಲಿಸಲು ಮುಂದಾಗಿದ್ದು ಯಾಕೆ ಅನ್ನೋ ಅನುಮಾನ ಕಾಂಗ್ರೆಸ್ ಕಾರ್ಯಕರ್ತರನ್ನು ಕಾಡುತ್ತಿದೆ.

ಜಾಹೀರಾತು