Saturday, September 21, 2024
ಚಿಕ್ಕಮಂಗಳೂರುದಕ್ಷಿಣ ಕನ್ನಡಸುದ್ದಿ

ಕಾಫಿನಾಡು ಗಾಳಿಮಳೆಗೆ ಮರ ಬಿದ್ದು ಪಾದಚಾರಿ ಮಹಿಳೆ ಸಾವು; 3 ಮಂದಿಗೆ ಗಾಯ –ಕಹಳೆ ನ್ಯೂಸ್

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಕಡೆ ಭಾರೀ ಮಳೆಯಾಗುತ್ತಿದ್ದು, ಎನ್.ಆರ್.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದಲ್ಲಿ ಮರ ಬಿದ್ದು ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಕೊಪ್ಪ ಮೂಲದ ಸವಿತಾ (48) ಎಂಬವರು ಮೃತಪಟ್ಟ ದುರ್ದೈವಿ. ಸವಿತಾ ಅವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಅವರ ಮೈ ಮೇಲೆ ಮರ ಬಿದ್ದಿದೆ. ಭಾರೀ ಗಾಳಿ-ಮಳೆಗೆ ಮಹಿಳೆ ಮತ್ತು ಕಾರಿನ ಮೇಲೆ ಏಕಕಾಲಕ್ಕೆ ಮರ ಬಿದ್ದಿದೆ.ಕಾರಿನ ಮೇಲೆ ಮರ ಬಿದ್ದು ಕಾರಿನಲ್ಲಿದ್ದ ಮೂವರಿಗೂ ತೀವ್ರ ಗಾಯಗೊಂಡಿದ್ದಾರೆ. ಕಾರು ಸಂಪೂರ್ಣ ಜಖಂಗೊAಡಿದೆ.
ಗಾಯಾಳುಗಳು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಎನ್.ಆರ್.ಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು