Friday, September 20, 2024
ಸುದ್ದಿ

ವ್ಯಕ್ತಿಯ ಕೊಲೆ ಯತ್ನ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡದ ಮೂಡಬಿದ್ರೆಯಲ್ಲಿ ನಡೆದಿದ್ದ ವ್ಯಕ್ತಿಯ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೋರ್ವ ಆರೋಪಿಯನ್ನ ಬಂಧಿಸಿದ್ದಾರೆ.

ಸೆಪ್ಟೆಂಬರ್ 24ರಂದು ಮೂಡುಬಿದಿರೆಯ ಕರಿಂಜೆ ಗ್ರಾಮದ ಗಂಟಾಲ್ಕಟ್ಟೆಯಲ್ಲಿ ನಡೆದ ಇಮ್ತಿಯಾಝ್ ಎಂಬುವವರ ಮೇಲೆ ಹಲ್ಲೆ ನಡೆದಿತ್ತು. ಬಂಧಿತನನ್ನ ಗುರುಪ್ರಸಾದ್ ಅಲಿಯಾಸ್ ಗುರುರಾಜ್ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣದ ಆರೋಪಿ ಇಮ್ತಿಯಾಜ್ ಎಂಬುವವರ ಹೋಟೆಲ್‌ಗೆ ಬೆಳಗ್ಗೆ 6 ಗಂಟೆಗೆ ಬಂದ ವ್ಯಕ್ತಿಯೋರ್ವ 10 ಚಹಾ ಬೇಕೆಂದು ಹೇಳಿದ್ದರು. ಬಳಿಕ ಇಮ್ರಿಯಾಜ್ ಚಹಾ ಮಾಡಲೆಂದು ಅಡುಗೆ ಕೋಣೆಗೆ ಹೋದ ಸಮಯದಲ್ಲಿ ಚಹಾ ಆರ್ಡರ್ ಮಾಡಿದ ವ್ಯಕ್ತಿಯ ಜೊತೆಯಲ್ಲಿ ಇತರೆ ಮೂವರು ಹೋಟೆಲ್‌ನ ಒಳಗೆ ತಲವಾರುವಿನೊಂದಿಗೆ ನುಗ್ಗಿ ದಾಳಿ ಮಾಡಿದ್ದರು.

ಜಾಹೀರಾತು

ಆಗ ಇಮ್ತಿಯಾಜ್ ಹಿಂದಿನ ಬಾಗಿಲಿನಿಂದ ಹೊರಗೆ ಓಡಿ ತಪ್ಪಿಸಿಕೊಂಡಿದ್ದ. ಈ ಬಗ್ಗೆ ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು ಕೆಲವು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದರು.

ವಾಮಂಜೂರು ಎಂಬಲ್ಲಿ ಗುರು ಅಲಿಯಾಸ್ ಗುರುರಾಜನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.