Saturday, September 21, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷರಾಗಿ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಅವಿರೋಧ ಆಯ್ಕೆ- ಕಹಳೆ ನ್ಯೂಸ್

ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷರಾಗಿ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಗುತ್ತಿಗೆದಾರರ ವಾರ್ಷಿಕ ಮಹಾಸಭೆ ಅಧ್ಯಕ್ಷ ನಾಗೇಶ್ ಕುಲಾಲ್ ನರಿಕೊಂಬು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇಳೆ 2024 ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೌರವಾಧ್ಯಕ್ಷರಾಗಿ ನಾಗೇಶ್ ಕುಲಾಲ್ ನರಿಕೊಂಬು,ಗೌರವ ಸಲಹೆಗಾರಾಗಿ ಇಬ್ರಾಹಿಂ ಮಂಚಿ, ಉಪಾಧ್ಯಕ್ಷರಾಗಿ ಜೆ ಟಿ ಟಿ ಇಕ್ಬಾಲ್ ಮತ್ತು ರಂಜನ್ ಕುಮಾರ್ ಅರಳ, ಕಾರ್ಯದರ್ಶಿಯಾಗಿ ಕರುಣಾಕರ ಪರ್ಪಂಜ, ಕೋಶಧಿಕಾರಿಯಾಗಿ ಯಶೋಧರ ಪೂಳಲಿ, ಸಂಘಟನಾ ಕಾರ್ಯದರ್ಶಿಯಾಗಿ ಬಾಲಕೃಷ್ಣ ಸೇರ್ಕಲ,ಜೊತೆ ಕಾರ್ಯದರ್ಶಿಯಾಗಿ ಪುಷ್ಪಾನಂದ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಪಿ ಎಸ್ ಲತೀಪ್ ಪಾಣೆ ಮಂಗಳೂರು, ನಾಗರಾಜ್ ವಿಟ್ಲ, ಉಮೇಶ್ ಗೌಡ ಸಿದ್ದಕಟ್ಟೆ, ನರಸಪ್ಪ ಪೂಜಾರಿ ವಿಟ್ಲ, ಅರುಣ್ ಡಿಸೋಜ ಮುಡಿಪು, ಜಲೀಲ್ ಮುಡಿಪು, ಮೋಹನ್ ದಾಸ್ ತುಂಬೆ, ರಿಯಾಜ್ ನಾವುೂರ, ಯಶ್ವಂತ್ ಕುಮಾರ್ ಕಠ್ಯಪದವು, ಸಾವುಲ್ ಕೊಡಾವ್ , ವಿನ್ಸೆಂಟ್ ಪಾಯಸ್ ಕೆದಿಲ ಇವರನ್ನು ಆಯ್ಕೆ ಮಾಡಲಾಗಿದೆ.

ಜಾಹೀರಾತು

ಇಬ್ರಾಹಿಂ ಮಂಚಿ ವಾರ್ಷಿಕ ವರದಿ ಮಂಡಿಸಿದರು, ಬಾಲಕೃಷ್ಣ ಸೆರ್ಕಳ ಸ್ವಾಗತಿಸಿ, ಕರುಣಾಕರ ಪರ್ಪುಂಜ ವಂದಿಸಿದರು. ಸುರೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.