Recent Posts

Saturday, September 21, 2024
ದಕ್ಷಿಣ ಕನ್ನಡಬೆಳ್ತಂಗಡಿಶಿಕ್ಷಣಸುದ್ದಿ

ಮಕ್ಕಳ ಮಾತುಕತೆ, ಉಪನ್ಯಾಸಕರ ಉಪನ್ಯಾಸ ಇಲ್ಲದೆ ಬಣಗುಡುತ್ತಿರುವ ನಯನಾಡು ಪಿಲಾತಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು-ಕಹಳೆ ನ್ಯೂಸ್

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಎರಡು ತಾಲೂಕುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ಬಡ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣ ವಂಚಿತರಾಗುವುದನ್ನು ತಪ್ಪಿಸಲು ನಿರ್ಮಾಣ ಮಾಡಿದ ಸರಕಾರಿ ಪದವಿಪೂರ್ವ ಕಾಲೇಜು ಊರ ಗ್ರಾಮಸ್ಥರ ಸಹಕಾರ ಹಾಗೂ ಲಕ್ಷಾಂತರ ಖರ್ಚು ಮಾಡುವ ದಾನಿಗಳ ಸಹಕಾರ ಇದ್ದರೂ ಕೇವಲ ಹದಿಮೂರು ವರ್ಷದಲ್ಲೇ ಬಾಗಿಲು ಮುಚ್ಚಿ ಮೌನವಾಗಿದೆ. ಹಲವಾರು ವರ್ಷಗಳಲ್ಲಿ ಈ ಕಾಲೇಜಿನಲ್ಲಿ ಮಕ್ಕಳ ಮಾತುಕತೆ, ಉಪನ್ಯಾಸಕರ ಉಪನ್ಯಾಸ ಇಲ್ಲದೆ ಬಣಗುಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು ಇದು ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳ ಗಡಿಪ್ರದೇಶವಾದ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನಯನಾಡು ಎಂಬಲ್ಲಿ ನಬಾರ್ಡ್ ಆರ್‌ಐಡಿಎಫ್-12 ಇದರ ಯೋಜನೆಯಡಿಯಲ್ಲಿ 2009-10ರಲ್ಲಿ ಆರಂಭಗೊAಡ ನಯನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಕಥೆ. ಬಜಿರೆ, ಪೊಸಪಟ್ನ, ಕುಳಾಲ್, ಎಡ್ತೂರು, ನೇರಳಕಟ್ಟೆ, ಮೂರ್ಜೆ, ನಿನ್ಯಾರು, ದೆಂಚಿನಡ್ಕ ಹೀಗೆ ಎರಡೂ ತಾಲೂಕುಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಯನಾಡು ಪದವಿಪೂರ್ವ ಕಾಲೇಜಿನಿಂದ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ತುಂಬಾ ಅನುಕೂಲವಾಗುತ್ತಿತ್ತು.

ಜಾಹೀರಾತು

ಹೇಗೆ ಸ್ಥಾಪನೆಯಾಯಿತು : ಸರಕಾರಿ ಪ್ರೌಢ ಶಾಲೆ ನಯನಾಡು ಇದರಲ್ಲಿ 4.10 ಎಕ್ರೆ ಭೂಮಿ ಇದ್ದು, ಇದರಲ್ಲಿ ರಸ್ತೆಗೆ ತಾಗಿಕೊಂಡಿರುವ ಜಾಗದಲ್ಲಿ ಈ ಕಾಲೇಜು ನಿರ್ಮಾಣವಾಯಿತು. ಕಾಲೇಜು ಆರಂಭದಲ್ಲಿ ಕೇವಲ ಎರಡು ಉಪನ್ಯಾಸಕರನ್ನು ನಿಯೋಜಿಸಿದ್ದು, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಕೊರತೆಯಾಗದಂತೆ ಸ್ಥಳೀಯ ಉದ್ಯಮಿಗಳು ಅತಿಥಿ ಉಪನ್ಯಾಸಕರನ್ನು ನೇಮಿಸುವ ಮುಖಾಂತರ ಕಾಲೇಜು ಉಳಿವಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು. ವಿದ್ಯಾರ್ಥಿಗಳಿಗೆ ಹತ್ತಿರದಲ್ಲೇ ಇರುವ ಪ್ರೌಢ ಶಾಲೆಯಿಂದ ಮಧ್ಯಾಹ್ನದ ಬಿಸಿಯೂಟವನ್ನೂ ನೀಡುವ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳ ಕೊರತೆ ಎಂಬ ನೆಪವೊಡ್ಡಿ ಇಲಾಖೆಯಿಂದಲೇ ಕಾಲೇಜು ಬಂದು ಮಾಡಲು ಸೂಚನೆ ಬಂದಿದ್ದು 2022-2023ರಲ್ಲಿ ಕಾಲೇಜು ಬಂದ್ ಮಾಡಲಾಯಿತು.

ಹೇಗಿತ್ತು ಕಾಲೇಜು : ಕಲಾ ಮತ್ತು ವಾಣಿಜ್ಯ ಈ ಎರಡು ವಿಭಾಗಗಳಲ್ಲಿ ಕಾಲೇಜು ಆರಂಭವಾಗಿರುತ್ತದೆ. ನಾಲ್ಕು ವಿಶಾಲವಾದ ತರಗತಿ ಕೊಠಡಿ, ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಕೊಠಡಿ, ಒಟ್ಟು ಆರು ವಿಶಾಲವಾದ ಕೊಠಡಿಗಳು ಈ ಕಟ್ಟಡದಲ್ಲಿದೆ. ಅಷ್ಟೇ ಅಲ್ಲದೇ ಮುಂದಿನ ಕಟ್ಟಡದ ಅಭಿವೃದ್ಧಿಗಾಗಿ ಮಹಡಿ ಮೆಟ್ಟಿಲುಗಳನ್ನು ಮಾಡಿದ್ದು ಇದರಿಂದಾಗಿ ಕಟ್ಟಡದ ಮೇಲ್ಭಾಗದಲ್ಲೂ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇತ್ತು.

ಈಗ ಹೇಗಿದೆ ಕಾಲೇಜು : ಕಾಲೇಜಿನ ಎದುರುಗಡೆ ಇರುವ ದ್ವಜಸ್ತಂಬದ ಸಿಂಹಗಳು ನಾಲ್ಕೂ ಬದಿಯಲ್ಲಿ ವಿದ್ಯಾರ್ಥಿಗಳ ಬರುವಿಕೆಗಾಗಿ ಕಾಯುತ್ತಿದೆ. ಕಾಲೇಜು ತರಗತಿಯ ಕೋಣೆಯಲ್ಲಿ ‘ವೆಲ್‌ಕಮ್ ಟೂ ಪಿಯುಸಿ’ ಎಂದು ವಿದ್ಯಾರ್ಥಿಗಳು ಅಂಟಿಸಿರುವ ಬಣ್ಣಕಾಗದದ ಅಲಂಕಾರಗಳೂ ಹಾಗೇ ಇದೆ. ಕಾಲೇಜು ಕಟ್ಟಡದ ಮಧ್ಯಭಾಗದಲ್ಲಿರುವ ಹೂವಿನ ಗಿಡಗಳಲ್ಲಿ ಮಳೆ ನೀರು ಬಿದ್ದು ಹೂ ಬಿಟ್ಟಿದೆ. ಕಾಲೇಜು ಕಟ್ಟಡದ ಹಿಂದುಗಡೆ ಪುಟ್ಟ ಗಿಡಗಳು ಮರವಾಗಿ ಬೆಳೆದಿದೆ. ಕ್ಲಾಸ್ ರೂಮ್‌ಗಳು ಯಾವುದೇ ಹಾನಿಯಾಗದೇ ದೂಳಿನಿಂದ ಕೂಡಿದೆ.

ಸರಕಾರದ ಯೋಜನೆಗಳಲ್ಲಿ ಕಟ್ಟಡಗಳು ನಿರ್ಮಾಣವಾಗಿ ನಂತರ ಅದನ್ನು ಎಲ್ಲಾ ವ್ಯವಸ್ಥೆಯೊಂದಿಗೆ ಮುಂದುವರಿಸಿಕೊAಡು ಹೋದರೆ ಇಂತಹ ಕಾಲೇಜು ಕಟ್ಟಡಗಳು ಅನಾಥವಾಗುತ್ತಿರಲಿಲ್ಲ. ಈಗ ಇರುವ ಈ ಕಟ್ಟಡ ಸುಸಜ್ಜಿತವಾಗಿದ್ದು, ಜಡಿ ಮಳೆ ಆರಂಭವಾಗುವ ಮೊದಲೇ ಈ ಕಟ್ಟಡವನ್ನು ಸ್ವಚ್ಛತೆ ಮಾಡಿ ಯಾವುದಾದರೂ ಸಂಬAಧ ಪಟ್ಟ ಇಲಾಖೆಗೆ ಕಟ್ಟಡ ಹಸ್ತಾಂತರಿಸಿ ಕಟ್ಟಡವನ್ನು ಉಳಿಸುವುದು ಅಗತ್ಯ.