Friday, September 20, 2024
ಸುದ್ದಿ

ಕುಮಾರ ಪರ್ವದ ಅಲೆಗೆ ಸಾಕ್ಷಿಯಾದ ಕಾಂಗ್ರೆಸ್-ಜೆಡಿಎಸ್ ಸಮಾವೇಶ – ಕಹಳೆ ನ್ಯೂಸ್

ಲೋಕಸಭಾ ಉಪ ಸಮರಕ್ಕೆ ಶಿವಮೊಗ್ಗ ರಣಕಣ ಸಿದ್ಧಗೊಂಡಿದ್ದು, ತೀರ್ಥಹಳ್ಳಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್-ಜೆಡಿಎಸ್ ಸಮಾವೇಶ ಕುಮಾರ ಪರ್ವದ ಅಲೆಗೆ ಸಾಕ್ಷಿಯಾಯಿತು.

ತೀರ್ಥಹಳ್ಳಿಯ ಸಂಸ್ಕೃತಿ ಮಂದಿರದಲ್ಲಿ ನಡೆದ ಸಮಾವೇಶಕ್ಕೆ 5,000 ಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿ ಮೈತ್ರಿ ಪಕ್ಷದ ಬಲ ಪ್ರದರ್ಶನ ಮಾಡಿದರು. ಜತೆಗೆ ಕಾಂಗ್ರೆಸ್-ಜೆಡಿಎಸ್ ಮಿಶ್ರ ನಾಯಕತ್ವಕ್ಕೆ ಜೈ ಜೈ ಎನ್ನುತ್ತಿರುವುದು ಕಂಡು ಬಂತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸಿಎಂ ಕುಮಾರ ಸ್ವಾಮಿ ಈ ನಾಡಿನ ಜನರ ಮನದಲ್ಲಿದ್ದೇನೆ. ಸಾಲ ಮನ್ನಾ ಮೂಲಕ ಪ್ರತಿ ಮನೆಗೂ ಸಹಕಾರಿಯಾಗಿದ್ದೇನೆ. ಹಿರಿಯ ಜೀವಿಗಳಿಗೆ 1,000 ರೂ.ಹಣ ಸಹಾಯ ಮಾಡಲಿದ್ದೇನೆ. ಮಲೆನಾಡಿನ ಅಡಿಕೆ ಬೆಲೆ, ಕಾಲು ಸಂಕಕ್ಕೆ ಬಜೆಟ್‌ನಲ್ಲಿ ಹಣ ಇಟ್ಟಿದ್ದೇನೆ. ಸಮಾವೇಶದಲ್ಲಿ ಜೆಡಿಎಸ್, ಕಾಂಗ್ರೆಸ್ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಜಾಹೀರಾತು