Saturday, September 21, 2024
ಉಡುಪಿಕುಂದಾಪುರಸುದ್ದಿ

ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರ ಇಲ್ಲಿ ಶ್ರೀರಾಮ ಪ್ರಸಾದ ಮಧ್ಯಾಹ್ನ ಊಟದ ಯೋಜನೆಯ ಪ್ರಾರಂಭೋತ್ಸವ ಕಾರ್ಯಕ್ರಮ –ಕಹಳೆ ನ್ಯೂಸ್

ಉಡುಪಿ : ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರ ಇಲ್ಲಿ ಶ್ರೀರಾಮ ಪ್ರಸಾದ ಮಧ್ಯಾಹ್ನ ಊಟದ ಯೋಜನೆಯ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.ಯೋಜನೆಯು 2006ರಲ್ಲಿ 25 ಮಕ್ಕಳಿಂದ ಪ್ರಾರಂಭಗೊAಡು ಈ ವರ್ಷ “ಶ್ರೀರಾಮ ಪ್ರಸಾದ” ಯೋಜನೆಯು ಪ್ರಥಮ ಪಿ ಯು.ಸಿ ಹಾಗೂ ದ್ವಿತೀಯ ಪಿ.ಯು.ಸಿ ಯ ಸುಮಾರು 180 ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಶ್ರೀ ಪಟ್ಟಾಭಿ ರಾಮಚಂದ್ರ ದೇವಳದ ಆಡಳಿತ ಮುಕ್ತೆಸರರಾದ ಶ್ರೀ ದಿನೇಶ್ ಜಿ ಕಾಮತ್ ಹಾಗೂ ಹಿರಿಯರಾದ ಶ್ರೀ ಶ್ರೀಧರ್ ವಿ ಕಾಮತ್ ಅವರು ಉಪಸ್ಥಿತರಿದ್ದರು. ಈ ಯೋಜನೆಯನ್ನು ಶ್ರೀರಾಮ ಸೇವಾಸಂಘ ಕೋಟೇಶ್ವರ ನಡೆಸಿಕೊಂಡು ಬರುತ್ತಿದೆ. ಸಂಘದ ಅಧ್ಯಕ್ಷರಾದ ಶಂಕರ್ ವಿ ಕಾಮತ್, ಉಪಾಧ್ಯಕ್ಷರಾದ ಪ್ರಕಾಶ್ ಪೈ, ಕಾರ್ಯದರ್ಶಿಗಳಾದ ಸದಾನಂದ ಪೈ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುಶೀಲ ಹೊಳ್ಳ ಅಧ್ಯಕ್ಷತೆಯಲ್ಲಿ ನಡೆಯಿತು.

ಜಾಹೀರಾತು