Friday, September 20, 2024
ಸುದ್ದಿ

ಟ್ಯಾಂಕರ್ ಡಿಕ್ಕಿ: ಬೈಕ್ ಸವಾರ ಸಾವು – ಕಹಳೆ ನ್ಯೂಸ್

ಮಂಗಳೂರು: ಟ್ಯಾಂಕರ್ ಡಿಕ್ಕಿಯಾಗಿ ಬೈಕ್ ಸವಾರ ಕೆಲಿಂಜ ನಿವಾಸಿ ಆಸ್ಪತ್ರೆಗೆ ಸಾಗಿಸುವ ವೇಳೆ ಮ್ರತ. ಇಸ್ಮಾಯಿಲ್ ಅವರ ಮಗ ಹಸನ್ ಸಾಯಿಕ್ (28) ಕೆಲಿಂಜ ಡಿಕ್ಕಿಯಾಗಿ ಮ್ರತ ಪಟ್ಟ ಯುವಕ. ಹಸನ್ ಅವರು ಮೂಡಬಿದ್ರೆ ಯಿಂದ ಕೆಲಸ ಮುಗಿಸಿ ಕೆಲಿಂಜ ಮನೆಗೆ ತೆರಳುವ ವೇಳೆ ಮೆಲ್ಕಾರ್ ಸಮೀಪ ಬೋಳಂಗಡಿ ಎಂಬಲ್ಲಿ ಅಪಘಾತಕ್ಕೊಳಗಾಗಿ ಮ್ರತಪಟ್ಟಿದ್ದಾರೆ.

ಮೂಡಬಿದ್ರೆ ಬುರ್ಕಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅತೀ ವೇಗದಲ್ಲಿ ಹಿಂದಿನಿಂದ ಬಂದ ಟ್ಯಾಂಕರ್ ಡಿಕ್ಕಿಯಾಗಿ ಪರಾರಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟ್ರಾಫಿಕ್ ಪೋಲೀಸರು ಕೂಡಲೇ ಕಾರ್ಯಪ್ರವತ್ತರಾಗಿ ಮಿತ್ತೂರು ಎಂಬಲ್ಲಿ ಟ್ಯಾಂಕರ್ ವಾಹನ ಅಡ್ಡಹಾಕಿ ಠಾಣೆಗೆ ಕರೆತಂದಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ ಮಂಜುಳಾ ಹಾಗೂ ಸಿಬ್ಬಂದಿಗಳು ಬೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.

ಜಾಹೀರಾತು