Saturday, September 21, 2024
ದಕ್ಷಿಣ ಕನ್ನಡಮಂಗಳೂರುಸುದ್ದಿ

ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ ಕಾರ್ಯಕ್ರಮ –ಕಹಳೆ ನ್ಯೂಸ್

ಮಂಗಳೂರು : ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿಯವರು ಮಂಗಳೂರಿನ ಎಸ್ ಸಿ ಎಸ್ ಆಸ್ಪತ್ರೆಯ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾದ ಡಾ.ಜೀನರಾಜ ಸೊರಕೆಯವರಿಗೆ ಬಿದಿರಿನ ಕೃತಕ ಗೂಡು,ಹಾಗೂ ಧಾನ್ಯಗಳನ್ನು ಇಡಲು ಮಣ್ಣಿನ ಪಾತ್ರೆ ನೀಡಿ, ಕ್ರತಕ ಗೂಡು ಇಡುವ ಕ್ರಮವನ್ನು ವಿವರಿಸಿ, ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ,ಪಕ್ಷಿಗಳ ಪಾಲಿಗೆ ನಾವೆಲ್ಲರೂ ಆಪತ್ಬಂಧವರಾಗಿ ಪಕ್ಷಿ ಸಂಕುಲಗಳ ಉಳಿಸೋಣ ಅಂದರು.
ಈ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕರು,ಕವಿ ಹಾಗೂ ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು