Friday, September 20, 2024
ಸುದ್ದಿ

ಗುಜರಿ ವಸ್ತುಗಳ ದಾಸ್ತಾನು ಕೊಠಡಿ ಬೆಂಕಿಗಾಹುತಿ: ಸಾವಿರಾರು ರೂ. ಮೌಲ್ಯದ ವಸ್ತು ನಷ್ಟ – ಕಹಳೆ ನ್ಯೂಸ್

ಉಡುಪಿ: ಬೆಳ್ಳಂಬೆಳಿಗ್ಗೆ ಗುಜರಿ ವಸ್ತುಗಳ ದಾಸ್ತಾನು ಕೊಠಡಿ ಬೆಂಕಿಗಾಹುತಿಯಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದಲ್ಲಿ ಈ ಒಂದು ಅಗ್ನಿ ಅನಾಹುತ ನಡೆದಿದ್ದು ಮನೆಯ ಮೇಲ್ಚಾವಣಿ ಸೇರಿದಂತೆ ಸಾವಿರಾರು ಮೌಲ್ಯದ ಗುಜರಿ ವಸ್ತುಗಳು ಸುಟ್ಟುಹೋಗಿದೆ.

ನಾಗೇಶ್ ಭಟ್ ಹಾಗೂ ಅರುಣ್ ಭಟ್ ಸಹೋದರರು ತಮ್ಮ ಮನೆಯ ಪಕ್ಕದಲ್ಲೇ ಒಂದು ಗುಜರಿ ಅಂಗಡಿ ನಡೆಸುತ್ತಿದ್ರು.ಬೆಳಿಗ್ಗೆ ಗುಜರಿ ದಾಸ್ತಾನು ಅಂಗಡಿ ಪಕ್ಜದಲ್ಲಿರುವ ಬಚ್ಚಲು ಕೋಣೆಯಲ್ಲಿ ನೀರು ಕಾಯಿಸುವಾಗ ಬೆಂಕಿ ಕಿಡಿ ಗುಜರಿ ದಾಸ್ತಾನಿಗೆ ವ್ಯಾಪಿಸಿ ಅಗ್ನಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಘಟನೆಯಲ್ಲಿ 50 ಸಾವಿರಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟುಹೋಗಿದ್ದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಆಗಮಿಸಿ ಹೆಚ್ಚಿನ ಅಗ್ನಿ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.