Saturday, September 7, 2024
ಉಡುಪಿಸುದ್ದಿ

ಸರ್ವ ಸ್ಪರ್ಶಿ, ದೂರ ದೃಷ್ಟಿಯ ಅಭಿವೃದ್ಧಿ ಪರ ಬಜೆಟ್: ಕಿಶೋರ್ ಕುಮಾರ್ ಕುಂದಾಪುರ- ಕಹಳೆ ನ್ಯೂಸ್

ಕೇಂದ್ರ ವಿತ್ತ ಸಚಿವರು ಮಂಡಿಸಿದ 2024-25ನೇ ಸಾಲಿನ ಬಜೆಟ್ ದೇಶವನ್ನು 2047ಕ್ಕೆ ಅಭಿವೃದ್ಧಿ ಹೊಂದಿದ ದೇಶವಾಗಿ ರೂಪಿಸುವಲ್ಲಿ ಕೊಟ್ಟಂತಹ ಒಂದು ರೋಡ್ ಮ್ಯಾಪ್ ಎಂದೇ ಪರಿಗಣಿಸಬಹುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ದೇಶದ ಆದ್ಯತೆಗಳನ್ನು 9 ಕ್ಷೇತ್ರಗಳನ್ನಾಗಿ ವಿಂಗಡಿಸಿ ಅದರಲ್ಲಿ ಸಂಶೋಧನೆ, ವಿಕಾಸ, ಉದ್ಯೋಗ ಸೃಷ್ಟಿ, ಉದ್ಯೋಗಿಗಳಿಗೆ ಬೇಕಾದ ತಂತ್ರಜ್ಞಾನ ಮತ್ತು ಪ್ರೋತ್ಸಾಹ ಧನ ನೀಡುವ ಸರ್ವಾಂಗೀಣ ಅಭಿವೃದ್ಧಿಯ ಬಜೆಟ್ ಇದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಧ್ಯಮ ವರ್ಗದವರಿಗೂ ಆದಾಯ ತೆರಿಗೆಯಲ್ಲಿ ರೂ.18,200/- ವಾರ್ಷಿಕ ಉಳಿತಾಯವಾಗುವಂತೆ ಮಾಡಿ ಕೃಷಿ ವಲಯ, ಉದ್ಯಮ ವಲಯ ಸಹಿತ ನಗರ, ಹಳ್ಳಿ, ಉದ್ಯೋಗ, ಕೌಶಲ್ಯ ಎಲ್ಲವನ್ನೂ ಸ್ಪರ್ಶಿಸಿರುವ ಸರ್ವ ಸ್ಪರ್ಶಿ ಬಜೆಟ್ ಮಂಡಿಸಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು