Friday, September 20, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಹಿರೇಬಂಡಾಡಿ ಪ್ರೌಢಶಾಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳು ಮತ್ತು ಶಾಲೆಯ ಪರಿಸರ ಸಂರಕ್ಷಣಾ ಸಮಿತಿ ಇವುಗಳ ಆಶ್ರಯದಲ್ಲಿ, ಟೀಂ ದಕ್ಷಿಣಕಾಶಿ (ರಿ) ಉಪ್ಪಿನಂಗಡಿ ಇದರ ಐದನೇ ವರ್ಷದ ಹೊಸ ಕಾರ್ಯಕ್ರಮ ವೃಕ್ಷ ಸಮೃದ್ಧಿಗೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು : ಹಿರೇಬಂಡಾಡಿ ಪ್ರೌಢಶಾಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳು ಮತ್ತು ಶಾಲೆಯ ಪರಿಸರ ಸಂರಕ್ಷಣಾ ಸಮಿತಿ ಇವುಗಳ ಆಶ್ರಯದಲ್ಲಿ ಟೀಂ ದಕ್ಷಿಣಕಾಶಿ (ರಿ) ಉಪ್ಪಿನಂಗಡಿ ಇದರ ಐದನೇ ವರ್ಷದ ಹೊಸ ಕಾರ್ಯಕ್ರಮವಾಗಿ ವೃಕ್ಷ ಸಮೃದ್ಧಿಗೆ ಚಾಲನೆ ಎಂಬ ವಿನೂತನ ಕಾರ್ಯಕ್ರಮ ಉದ್ಘಾಟನೆಗೊಂಡಿತು.


ಉಧ್ಘಟನಾ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಸಮಿತಿಯ ಅಧ್ಯಕ್ಷರು ಹಿರೇ ಬಂಡಾಡಿ ಬಿಟ್ ವ್ಯಾಪ್ತಿಯ ಅರಣ್ಯ ರಕ್ಷಣಾಧಿಕಾರಿಗಳು ಶಾಲಾ ಪ್ರಾಂಶುಪಾಲರು ಹಾಗೂ ಹಿರಿಯರಾದ ಗುಡ್ಡಪ್ಪ ಬಲ್ಯ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಟೀಮ್ ದಕ್ಷಿಣಕಾಶಿಯ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಪೆರಿಯಡ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಸ್ತಾವಿಕವನ್ನು ಟೀಮ್ ದಕ್ಷಿಣ ಕಾಶಿಯ ಗೌರವಾಧ್ಯಕ್ಷರಾದ ರವಿ ಇಳಂತಿಲತಿರ ಇವರು ನಿರ್ವಹಿಸಿದರು. ಧನ್ಯವಾದದ ಬಳಿಕ ಸಿಹಿ ತಿಂಡಿ ವಿತರಣೆಯೊಂದಿಗೆ ಶಾಲಾ ಮೈದಾನದ ಆವರಣದಲ್ಲಿ ಪ್ರಾರಂಭಿಕ ಹಂತವಾಗಿ 70 ಗಿಡಗಳನ್ನು ನೆಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು