Friday, September 20, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕುಂಜೂರು ಪಂಜ ಶ್ರೀ ದುರ್ಗಾ ಭಜನಾ ಮಂದಿರದ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು : ಕುಂಜೂರು ಪಂಜ ಶ್ರೀ ದುರ್ಗಾ ಭಜನಾ ಮಂದಿರದ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಗುರು ಪೌರ್ಣಮಿಯ ಪ್ರಯುಕ್ತ ಗುರುಪೂಜಾ ಉತ್ಸವ ಇಂದು ಬೆಳಿಗ್ಗೆ ಶ್ರೀದುರ್ಗಾ ಭಜನಾ ಮಂದಿರದಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಜಯಂತ್ ಕುಂಜೂರು ಪಂಜ, ಉಪಾಧ್ಯಕ್ಷ ಅರುಣ್ ಕುಮಾರ್ ರೈ ಕಲ್ಕೋಟೆ, ಕಾರ್ಯದರ್ಶಿ ರಾಜೇಶ್ ಗೌಡ ಬಂಗಾರಡ್ಕ, ಜೊತೆ ಕಾರ್ಯದರ್ಶಿ ನವೀನ್ ಪೂಜಾರಿ ಕುಂಜೂರು ಪಂಜ, ಗಣೇಶೋತ್ಸವದ ಮಾಜಿ ಅಧ್ಯಕ್ಷರಾದ ವಿರೂಪಾಕ್ಷ ಭಟ್ ಮಚ್ಚಿಮಲೆ, ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷರಾದ ಜಿ ರಾಧಾಕೃಷ್ಣ ಗೌಡ,ಕಾರ್ಯದರ್ಶಿ ಜಗದೀಶ್ ಒಳತ್ತಡ್ಕ, ಹಾಗೂ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಸಮಿತಿಯ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಯ್ಕ, ಪ್ರಮೋದ್ ಕುಮಾರ್ ಜೈನ್, ಸುರೇಶ ಪೂಜಾರಿ, ಜಿ ಟಿ ನವೀನ್ ರೈ,ಗಣೇಶ್ ಕೆ ಪಿ ಯಶೋಧರ ಆರಿಗ, ಕೃಪನ್ ಅಟ್ಲಾರು ಹಾಗೂ ಶ್ರೀ ದುರ್ಗಾ ಭಜನಾ ಮಂಡಳಿಯ ಮಕ್ಕಳ ಭಜನಾ ತಂಡವರು ಹಾಗೂ ಊರ ಭಕ್ತಾಧಿಮಾನಿಗಳು ಉಪಸ್ಥಿತರಿದ್ದರು. ಗುರುರಾಜ್ ಕಲ್ಲೂರಾಯ ಗುರುಪೂಜಾ ಕಾರ್ಯಕ್ರಮ ನೆರೆವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು