Saturday, September 21, 2024
ಕ್ರೈಮ್ಬೆಂಗಳೂರುಸುದ್ದಿ

ಶ್ರಾವಣ ಆದ್ಮೇಲೆ ಬಾಳು ಕೊಡ್ತೀನಿ ಅಂತ ಹೇಳಿ ಆಂಟಿಗೆ ವಂಚನೆ ; ಪ್ರಜ್ವಲ್‌ ವಿರುದ್ಧ ದೂರು – ಆಂಟಿಯೊಂದಿಗೆ ಪ್ರೇಮ್‌ ಕಹಾನಿಯೇ ಥ್ರಿಲ್ಲಿಂಗ್‌! – ಕಹಳೆ ನ್ಯೂಸ್

ಬೆಂಗಳೂರು: ಪ್ರೀತಿಯೊಂದು (Love) ಸುಂದರ ಅನುಭವ. ಅದನ್ನು ಅನುಭವಿಸಬೇಕೇ ಹೊರತು ಹೇಳಿಕೊಳ್ಳಲಾಗುವುದಿಲ್ಲ. ಅದಕ್ಕಾಗಿ ಕೆಲವರು ಪ್ರೀತಿಯೆಂಬುದೇ ಮಾಯೆ ಎನ್ನುತ್ತಾರೆ. ಕೆಲವರಿಗೆ ಹೇಳಿಕೊಳ್ಳಲು ಸಂಕೋಚ, ಹೇಳಿಕೊಂಡರೇ ಇದ್ದ ಸಂಬಂಧವೂ ಬಿಟ್ಟುಹೋಗುತ್ತದೆ ಅನ್ನೋ ಆತಂಕ. ಆದರೀಗ ಅದೆಲ್ಲದಕ್ಕೂ ಆನ್‌ಲೈನ್ ತಂತ್ರಜ್ಞಾನ ದಾರಿಮಾಡಿಕೊಟ್ಟಿದೆ. ಆದ್ರೆ ಇದರಿಂದ ಅನುಕೂಲ ಆಗುವುದಕ್ಕಿಂತ ಅನಾನುಕೂಲಕ್ಕೆ ದಾರಿ ಮಾಡಿಕೊಳ್ಳುತ್ತಿರುವುದೇ ಹೆಚ್ಚು ಅನ್ನೋದಕ್ಕೆ ಬೆಂಗಳೂರಿನಲ್ಲಿ (Bengaluru) ನಡೆದಿರುವ ಆಂಟಿ ಲವ್‌ ಪ್ರಕರಣವೊಂದು ಸಾಕ್ಷಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಆಷಾಢ ಕಳೆದು ಶ್ರಾವಣ ಬಂದ್ರೆ ಮದುವೆ ಆಗೇ ಆಗ್ತೀನಿ, ಶ್ರಾವಣ ಬರಲಿ ನಿನಗೆ ಬಾಳು ಕೊಡ್ತಿನಿ ಎಂದು ರೀಲ್ಸ್ ರಾಣಿಯನ್ನ ನಂಬಿಸಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗಂಡನಿಂದ ದೂರವಿದ್ದ 2 ಮಕ್ಕಳ ತಾಯಿಯನ್ನ ನಂಬಿಸಿ ಮೋಸ ಮಾಡಿರುವ ಘಟನೆ ನಡೆದಿದ್ದು, ಆರೋಪಿ ಪ್ರಜ್ವಲ್‌ ಎಂಬಾತನ ವಿರುದ್ಧ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ (Kengeri Police Station) ದೂರು ದಾಖಲಾಗಿದೆ.

ಜಾಹೀರಾತು

ಆಂಟಿಯೊಂದಿಗೆ ಪ್ರೇಮ್‌ ಕಹಾನಿಯೇ ಥ್ರಿಲ್ಲಿಂಗ್‌!
ತನ್ನ ಗಂಡ ಹಲ್ಲೆ ಮಾಡುತ್ತಿದ್ದ ಅಂತ 13 ವರ್ಷಗಳ ಹಿಂದೆಯೇ ಗಂಡನನ್ನು ಬಿಟ್ಟಿದ್ದ ಮಹಿಳೆ ತವರು ಮನೆಯಿಂದಲೂ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. 8 ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು, ಜೀವನೋಪಾಯಕ್ಕಾಗಿ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಹೇಗೋ ಜೀವನ ನಡೆಯುತ್ತಿತ್ತು. ಇದಾದ ಸ್ವಲ್ಪ ದಿನಗಳಲ್ಲೇ ಬೇಸರ ಕಳೆಯಲು ರೀಲ್ಸ್‌ ಮಾಡುತ್ತಿದ್ದಳು. ಈ ವೇಳೆ ವಂಚಕ ಪ್ರಜ್ವಲ್‌ನ ಪರಿಚಯವಾಗಿದೆ.

ಮಹಿಳೆ ಮಾಡ್ತಿದ್ದ ಪ್ರತಿ ರೀಲ್ಸ್‌ಗೂ ಪ್ರಜ್ವಲ್‌ ಹಾರ್ಟ್‌ ಎಮೋಜಿಯೊಂದಿಗೆ ಕಾಮೆಂಟ್‌ ಮಾಡ್ತಿದ್ದ. ಇದೇ ವೇಳೆ ಇಬ್ಬರಿಗೂ ಪರಿಚಯವಾಗಿ ಕೊನೆಗೆ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಆಕೆಗೆ ಮದ್ವೆ ಆಗಿರುವುದು ಗೊತ್ತಿದ್ದರೂ ತಾನು ಬಾಳು ಕೊಡ್ತೀನಿ ಎಂದಿದ್ದ ಯುವಕ, ತನ್ನ ತಾಯಿ ಬಳಿಯೂ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದನಂತೆ. ಮಹಿಳೆಗೆ ನಾನು ನೋಡಲು ಚೆನ್ನಾಗಿಲ್ಲ ನಿಂಗೆ ಮದ್ವೆಯಾಗಿದ್ದರೂ ಪರ್ವಾಗಿಲ್ಲ ನಾನು ಬಾಳು ಕೊಡ್ತಿನಿ ಎಂದು ಸಹ ಹೇಳಿದ್ದಾನೆ. ಶ್ರಾವಣ ಮಾಸದ ಬಳಿಕ ಮದ್ವೆಯಾಗ್ತೀನಿ ಅಂತ ಹೇಳಿದ್ದಾನೆ. ಅಲ್ಲದೇ ಆಕೆಯೊಂದಿಗೆ 3 ತಿಂಗಳು ಗುಟ್ಟಾಗಿ ಸಂಸಾರ ಕೂಡ ಮಾದಿದ್ದಾನೆ. ಮಕ್ಕಳನ್ನೂ ಚೆನ್ನಾಗಿ ನೋಡಿಕೊಂಡಿದ್ದಾನೆ. ಎಲ್ಲವೂ ಚೆನ್ನಾಗಿಯೇ ಇತ್ತು ಎನ್ನುವಾಗ ಪ್ರಜ್ವಲ್‌ ಆಕೆಯಿಂದ ದೂರವಾಗಲು ಬಯಸಿದ್ದಾನೆ.

ನೀನು ನನಗೆ ಬೇಡ, ಹೋಗಿ ನಿನ್ನ ಹಳೇ ಗಂಡನ್ನ ಕರ್ಕೊಂಡು ಬಾ, ನಿನ್ನ ಮೇಲೆ ಅನುಮಾನ ಇದೆ ಅಂತ ಹೇಳಿದ್ದಾನೆ. ಸದ್ಯ ಪ್ರಜ್ವಲ್‌ ಬೇಕೇ ಬೇಕು ಅಂತ ಪಟ್ಟು ಹಿಡಿರುವ ಮಹಿಳೆ ಆತ ಮದುವೆಯಾಗಲಿಲ್ಲ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.