Friday, September 20, 2024
ಸುದ್ದಿ

ದೇಶಪಾಂಡೆ ವಿರುದ್ಧ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಗರಂ – ಕಹಳೆ ನ್ಯೂಸ್

ದೆಹಲಿ: ಕಾರವಾರದಲ್ಲಿ ನಡೆದ ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಯುವ ಕ್ರೀಡಾಳುಗಳಿಗೆ ಸಲ್ಲಬೇಕಿದ್ದ ಕ್ರೀಡಾ ಪರಿಕರಗಳನ್ನು ಎಸೆದು ಅವಮಾನ ಮಾಡಿದ ಸಚಿವ ಆರ್ ವಿ ದೇಶಪಾಂಡೆ ವಿರುದ್ಧ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಗರಂ ಆಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಚಿವರು ಕ್ರೀಡಾ ಪರಿಕರಗಳನ್ನು ಎಸೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಚಿವರ ನಡೆಯನ್ನು ಬಿಜೆಪಿ ಟೀಕಿಸಿದೆ. ಅಷ್ಟೇ ಅಲ್ಲ ಮತ್ತೊಬ್ಬ ಎಚ್ ಡಿ ರೇವಣ್ಣ ಎಂದು ಲೇವಡಿ ಮಾಡಿದೆ.

ಜಾಹೀರಾತು

ಹಿಂದೆ ಕೊಡಗು ಪ್ರವಾಹ ಸಂತ್ರಸ್ತರಿಗೆ ಬಿಸ್ಕತ್ ಎಸೆದು ಸಚಿವ ಎಚ್ ಡಿ ರೇವಣ್ಣ ಅವಮಾನ ಮಾಡಿದ್ದು ಭಾರೀ ವಿವಾದವಾಗಿತ್ತು.