Saturday, September 14, 2024
ಉಡುಪಿಸುದ್ದಿ

ಉಡುಪಿ ವಲಯ ಹಾಗೂ ಎಸ್.ವಿ.ಎಸ್. ಪ.ಪೂ. ಕಾಲೇಜು ಕಟಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ವಲಯದ ಪ್ರೌಢಶಾಲಾ ಬಾಲಕಿಯರ, ತೋಬಾಲ್ ಪಂದ್ಯಾಟ 2024- ಕಹಳೆ ನ್ಯೂಸ್

ಉಡುಪಿ : ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಉಡುಪಿ ವಲಯ ಹಾಗೂ ಎಸ್.ವಿ.ಎಸ್. ಪ.ಪೂ. ಕಾಲೇಜು ಕಟಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ವಲಯದ ಪ್ರೌಢಶಾಲಾ ಬಾಲಕಿಯರ, ತೋಬಾಲ್ ಪಂದ್ಯಾಟ ನಡೆಯಿತು.

ಕಾರ್ಯಕ್ರಮ ದ ಉದ್ಘಾಟನೆ ಮಾಡಿದ ಬಿ ಇ ಒ ಡಾ. ಎಲ್ಲಮ್ಮ ಉಡುಪಿ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಇರುವ ಪೆÇ್ರಸ್ತಹ ಮತ್ತು ಅವಕಾಶಗಳು ಜಿಲ್ಲಾ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಗಳನ್ನು ಮಾಡಲು ಸಾಧ್ಯ ಇದೆ, ವ್ಯವಸ್ಥಿತವಾದ ಅವಕಾಶ ಗಳನ್ನು ನಿಮ್ಮದಾಗಿಸಿಕೊಳ್ಳಿ ಮಾರ್ಗದರ್ಶನಕ್ಕಾಗಿ ಸದಾ ನಾವು ನಿಮ್ಮೊಂದಿಗೆ ಇದ್ದೇವೆ, ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರ ದಲ್ಲಿ ಉತ್ತಮ ಸಾಧನೆ ಮಾಡಿ ಎಂದು ಆಶಯ ವ್ಯಕ್ತ ಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷರು ಮತ್ತು ಎಸ್ ವಿ ಸ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಕೆ ಸತ್ಯಂದ್ರ ಪೈಗಳು ನಮ್ಮ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮಾಡುವ, ಅವರಿಗೆ ಉಪಯೋಗ ವಾಗುವ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಎಸ್ ವಿ ಸ್‍ವಿದ್ಯಾ ಸಂಸ್ಥೆಯು ಅವಕಾಶದ ಜೊತೆಗೆ ವ್ಯವಸ್ಥೆ ಗಳನ್ನು ಮಾಡುತ್ತೇವೆ ಎಂದರು.

ಜಾಹೀರಾತು

ಪಂದ್ಯಾಟದ ಉದ್ಘಾಟನೆಯನ್ನು ಹ. ವಿ. & ರಾಷ್ಟ್ರೀಯ ಕ್ರೀಡಾಪಟು ವಿನ್ನಿ ಡಿಸೋಜಾರವರು ನೆರವೇರಿಸಿದರು.

ಮುಖ್ಯಅತಿಥಿಗಳಾದ ಪ್ರಭಾ.ಬಿ ಶೆಟ್ಟಿ ಗ್ರಾಮ ಪ. ಅಧ್ಯಕ್ಷರು ,ಕಟಪಾಡಿ ರವೀಂದ್ರ ನಾಯಕ್ ,ವೆಂಕಟರಮಣ ಭಟ್ ಆ. ಮ. ಸದಸ್ಯರು ,ನಿತ್ಯಾನಂದ ಶನೈ , ಆ. ಮ.ಸ ವಿನಯ್ ಬಲ್ಲಾಳ್ ದಾನಿ, ಹ. ವಿ ಪ್ರೇಮಕುಮಾರ್ ಹ. ವಿ. ಸಂಘ ಅಧ್ಯಕ್ಷ ಶ್ರೀಮತಿ ಲಕ್ಷ್ಮಿ ಮತ್ತು ಶಕುಂತಲಾ ರೋಟರಿ ಕ್ಲಬ್ , ರಿತೇಶ್ ಶೆಟ್ಟಿ ಯು. ಸಬಾಲೀಕರಣ & ಕ್ರೀಡಾ ಇಲಾಖೆ ಕಾಪು ವಲಯಧಿಕಾರಿ ವಸಂತ್ ಜೋಗಿ, ಉಡುಪಿ ತಾಲೂಕ್ ಅಧಿಕಾರಿ ಮಾಜಿ, ಸಂಚಾಲಕ ವಸಂತ್ ಮಾದವ ಭಟ್, ರಾಘವೇಂದ್ರ ರಾವ್ ಸಂಚಾಲಕರು ಪ್ರೇರಣಾ ಟ್ರಸ್ಟ್ ಚಂದ್ರಶೇಖರ್ ಉಡುಪಿ ವಲಯ ದೈ. ಶಿ. ಶಿ. ಸಂಘ ಅಧ್ಯಕ್ಷ ಪ್ರಾಂಶುಪಾಲರು ಮು. ಶಿಕ್ಷಕು ಉಪಸ್ಶಿತರಿದ್ದರು.

ಮುಖ್ಯ ಶಿಕ್ಷಕಯಾದ ಸುಬ್ರಹ್ಮಣ್ಯ ತಂತ್ರಿಯವರು ಸ್ವಾಗತಿಸಿದರು, ಹಿರಿಯ ಶಿಕ್ಷಕಿ ಜಯ ಲಕ್ಷ್ಮಿ ಧನ್ಯವಾದ ಕೋರಿದರು, : ಕಿರಣ್ ಶೆಟ್ಟಿ ದೈಹಿಕ ಶಿಕ್ಷಕರು ನಿರೂಪಿಸಿದರು.