Friday, September 20, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಗಣೇಶ ಮಂದಿರ ಗೋಳ್ತಮಜಲು ಇದರ ಆಶ್ರಯದಲ್ಲಿ 33ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ-ಕಹಳೆ ನ್ಯೂಸ್

ಗೋಳ್ತಮಜಲು : ಶ್ರೀ ಗಣೇಶೋತ್ಸವ ಆಡಳಿತ ಟ್ರಸ್ಟ್ ಗಣೇಶೋತ್ಸವ ಉತ್ಸವ ಸಮಿತಿ ಮಾತೃ ಸಮಿತಿ ಗಣೇಶ್ ನಗರ ಗೋಳ್ತಮಜಲು ಇದರ ಆಶ್ರಯದಲ್ಲಿ 33ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ ಸಡಗರದಿಂದ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂದಿರದ ಗೌರವಾಧ್ಯಕ್ಷರಾದ ಶ್ರೀ ಜಿ ಶಾಮ್ ಭಟ್ ತೋಟ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀದೇವಿ ಪ್ರೌಢಶಾಲೆ, ಪುಣಚ ಇಲ್ಲಿನ ಅಧ್ಯಾಪಕರಾದ ಶ್ರೀ ವಿನೋದ್ ಶೆಟ್ಟಿ ಅಡ್ಕಸ್ಥಳ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಗಣೇಶೋತ್ಸವದ ಮಹತ್ವವನ್ನು ಜೊತೆಗೆ ನಮ್ಮ ಸಮಾಜವು ಒಗ್ಗಟ್ಟಿನಲ್ಲಿದ್ದರೆ ಬಾಹ್ಯ ಶತ್ರುಗಳು ಎಷ್ಟೆ ಬಲಶಾಲಿಯಾಗಿದ್ದರೂ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

ಜಾಹೀರಾತು

ಶ್ರೀ ಜಿ ಶ್ಯಾಮ್ ಭಟ್ ತೋಟ ಅಧ್ಯಕ್ಷತೆ ವಹಿಸಿದ್ದು ಸಮಯೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಆಡಳಿತ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ ಟೈಲರ್ ಗೋಳ್ತಮಜಲು,.ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ತಿಲಕ್ ರಾಜ್ ಹೊಸೈಮಾರು, ಮಾತೃ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ನಳಿನಿ ಡೊಂಬಯ್ಯ ಪೂಜಾರಿಯವರ ಉಪಸ್ಥಿತಿಯಲ್ಲಿ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ್ ಟೈಲರ್ ಪ್ರಾಸ್ತಾವಿಕ ಭಾಷಣಗೈದರು.
ಸಮಾರಂಭದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್,ಶ್ರಿ ಮುರಳಿಕೃಷ್ಣ ಭಟ್,ಶ್ರಿ ಮಿಥುನ್ ಪೂಜಾರಿ ಹೊಸಮನೆ,ಮಾತೃ ಸಮಿತಿ ಕಾರ್ಯದರ್ಶಿ ಶ್ರೀಮತಿ ನಳಿನಿ ಜಯರಾಮ್, ಶ್ರೀ ಸುಂದರ ಅಳ್ವ ಗೋಳ್ತಮಜಲು ಶ್ರೀ ಆನಂದ ಅಳ್ವ,ಶ್ರೀ ಸುಂದರ ಶೆಟ್ಟಿ ಗೋಳ್ತಮಜಲು ಶ್ರಿದಿನೇಶ್ ಗೋಳ್ತಮಜಲು, ಕಾರ್ಯದರ್ಶಿ ಶ್ರೀ ರಾಮಚಂದ್ರ ಸಾಲ್ಯಾನ್,ಜತೆ ಕಾರ್ಯದರ್ಶಿ ಶ್ರಿ ಪ್ರಜ್ವಲ್ ಅಂಕದಡ್ಕ, ಶ್ರಿನಾಗೇಶ್ ಆಚಾರ್ಯ,ಶ್ರೀ ಮೋಹನ್ ಎಚ್ ಶ್ರೀ ಪವನ್ ಹೊಸಮನೆ, ಶ್ರೀ ಮೋನಪ್ಪ ಗಣೇಶ್ ಕೋಡಿ,ಶ್ರೀ ರವಿರಾಜ್ ಶ್ರೀ ವಿಘ್ನೇಶ್,ಮಹೇಶ್ ಅಶ್ವಥ್ ಮೊದಲಾದವರು ಉಪಸ್ಥಿತರಿದ್ದರು.

ಕು|| ದೀಕ್ಷಾ ಗೋಳ್ತಮಜಲು ಸ್ವಾಗತಿಸಿ,ಶ್ರಿ ಜಗದೀಶ್ ಬಲ್ಕಟ್ಟ ಹಾಗೂ ಕು|| ಲಾವಣ್ಯ ಗೋಳ್ತಮಜಲು ಬಹುಮಾನ ವಿಜೇತರ ಹೆಸರನ್ನು ವಾಚಿಸಿದರು.ಕೊನೆಯಲ್ಲಿ ಶ್ರೀ ಮೋನಪ್ಪ ದೇವಶ್ಯ ವಂದಿಸಿ, ಶ್ರಿ ರವೀಶ್ ಗಣೇಶ್ ಕೋಡಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.