Friday, September 20, 2024
ಸುದ್ದಿ

ಸರ್ಕಾರದ ಧೋರಣೆಯ ವಿರುದ್ಧ ಹೋರಾಟ ನಡೆಸಿಯೇ ಸಿದ್ಧ: ಆರ್. ಅಶೋಕ್ – ಕಹಳೆ ನ್ಯೂಸ್

ಮೈಸೂರು: ನ. 10ರಂದು ಟಿಪ್ಪು ಜಯಂತಿ ಆಚರಿಸಲು ಉದ್ದೇಶಿಸಿರುವ ಟಿಪ್ಪು ಸುಲ್ತಾನ್ಗೆ ರಾಜ್ಯದೆಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಟಿಪ್ಪು ಜಯಂತಿ ದಿನ  ಪ್ರತಿಭಟನೆ ಮಾಡಿಯೇ ಮಾಡುತ್ತೇವೆ ಸರ್ಕಾರಕ್ಕೆ ಧಮ್​ ಇದ್ದರೆ ನಮ್ಮನ್ನು ಬಂಧಿಸಲಿ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್  ಸವಾಲು ಹಾಕಿದ್ದಾರೆ.

ಈ ಸರ್ಕಾರಕ್ಕೆ ಟಿಪ್ಪುವೇ ಯಾಕೆ ಬೇಕು?  ಕಳೆದ ಬಾರಿ ಟಿಪ್ಪು ವಿಚಾರದಲ್ಲಿ  ಹೆಚ್​.ಡಿ. ಕುಮಾರಸ್ವಾಮಿ ತಟಸ್ಥರಾಗಿದ್ದರು. ಈಗ ಮೈತ್ರಿ ಸರ್ಕಾರವಿರುವುದರಿಂದ ಕಾಂಗ್ರೆಸ್​ನ ಕೆಲಸಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಅಶೋಕ್ ಟೀಕಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಟಿಪ್ಪು ಮೈಸೂರಿನ ಒಡೆಯರ್ ಕುಟುಂಬವನ್ನು ಅಮಾನತಿನಲ್ಲಿ ಇಟ್ಟಿದ್ದ. ಅಂಥ ವ್ಯಕ್ತಿಯ ಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ. ರಾಜ್ಯ ಸರ್ಕಾರ ಮತ ಬ್ಯಾಂಕ್​ಗಾಗಿ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ. ಬೇಕಿದ್ದರೆ ಅಬ್ದುಲ್​ ಕಲಾಂ, ಶಿಶುನಾಳ ಷರೀಫರ ಜಯಂತಿ ಆಚರಣೆ ಮಾಡಲಿ. ಎಂದು ಅಶೋಕ್ ಹೇಳಿದ್ದಾರೆ.

ಜಾಹೀರಾತು