Friday, September 20, 2024
ರಾಜಕೀಯಸುದ್ದಿ

ಮೈತ್ರಿ ಕೂಟದ ಮಾಸ್ಟರ್ ಪ್ಲಾನ್ ಸಕ್ಸೆಸ್: ರಾಮನಗರ ಕ್ಷೇತ್ರದಿಂದ ವಿಜಯದ ಮಾಲೆ ತೊಟ್ಟ ಅನಿತಾ ಕುಮಾರಸ್ವಾಮಿ – ಕಹಳೆ ನ್ಯೂಸ್

ರಾಮನಗರ: ಮೈತ್ರಿ ಕೂಟದ ಮಾಸ್ಟರ್ ಪ್ಲಾನ್ ಸಕ್ಸೆಸ್ ಆಗಿದೆ ಯಾಕೆಂದ್ರೆ ನಾಲ್ಕು ಕ್ಷೇತ್ರಗಳಲ್ಲಿ ವಿಜಯದ ಹಾದಿಯನ್ನು ಮೈತ್ರಿ ಕೂಟ ತಲುಪುತ್ತಿದೆ. ರಾಮನಗರ ಕ್ಷೇತ್ರದಿಂದ ಅನಿತಾ ಅವರಿಗೆ ಪ್ರಮುಖ ಸ್ಪರ್ಧಿಯಾಗಿದ್ದು ವಿಜಯದ ಮಾಲೆಯನ್ನು ತೊಟ್ಟಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿದ್ದ ಎಲ್ ಚಂದ್ರಶೇಖರ್ ಅವರು, ಮತದಾನ ಇನ್ನೇನು ಎರಡೇ ದಿನಗಳಿರುವಾಗ ಭಾರತೀಯ ಜನತಾ ಪಕ್ಷಕ್ಕೆ ಕೈಕೊಟ್ಟು ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ, ರಾಮನಗರದಲ್ಲಿ ಕಾಟಾಚಾರಕ್ಕೆ ಮತದಾನ ನಡೆದಿತ್ತು. ಸರಿಯಾಗಿ 8 ಗಂಟೆಗೆ ಮತಎಣಿಕೆ ಆರಂಭವಾಗಿದ್ದು, ಅಚ್ಚರಿಯ ಫಲಿತಾಂಶ ಬರುವುದು ಅನುಮಾನ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಆದರೆ, ಚಂದ್ರಶೇಖರ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಅಧಿಕೃತ ಮಾಹಿತಿ ನೀಡದಿದ್ದ ಕಾರಣ ಅವರ ಹೆಸರು ಮತಪೆಟ್ಟಿಗೆಯಲ್ಲಿ ಹಾಗೆಯೇ ಇತ್ತು. ಹೀಗಾಗಿ ಅವರಿಗೆ ಒಂದಿಷ್ಟು ಮತಗಳ ಬಂದಿರುವ ಉಲ್ಲೇಖ ಮಾಡಲೇಬೇಕಾಗಿದೆ.