Friday, September 20, 2024
ಸುದ್ದಿ

ಕೋಟ್ಯಾಂತರ ಹಣ ಲೂಟಿ: ಮಿಂಚಿನ ಕಾರ್ಯಚರಣೆಯಿಂದ ಆರೋಪಿಗಳ ಬಂಧನ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗ್ತಾ ಇವೆ. ಅದರಲ್ಲೂ ಚಿನ್ನದ ಶಾಪ್ ಓನರ್‍ಗಳನ್ನು ಫೊಲೋ ಮಾಡಿ ಕಳ್ಳತನ ಮಾಡೋ ಗ್ಯಾಂಗ್ ಜಾಸ್ತಿಯಾಗಿದೆ. ಕಾರ್‍ಸ್ಟ್ರೀಟ್‍ನಲ್ಲಿರುವ ಸಂತೋಷ್ ವೈಷ್ಣವಿ ಬೆಳ್ಳಿ ಆಭರಣಗಳ ಮಾಲಿಕನಾಗಿದ್ದಾರೆ. ಸಂತೋಷ್ ಎಂಬವರಿಗೆ ಸೇರಿದ ಹಣವನ್ನು ಮುಂಬಯಿಯಿಂದ ಮಂಗಳೂರಿಗೆ ತರುವಾಗ ಒಟ್ಟು 6 ಜನ ಕೋಟ್ಯಾಂತರ ಹಣವನ್ನು ಲೂಟಿ ಮಾಡಿದ್ದಾರೆ.

ಈ ಪ್ರಕರಣವು ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಮಿಂಚಿನ ಕಾರ್ಯಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್ ಮನ್ನಾನ್, ರಾಝಿ ಎಂದು ಶಂಕಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತ ಆರೋಪಿಗಳಿಂದ 1.75 ಕೋಟಿ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ ಇನೋವಾ ಕಾರು ವಶಕ್ಕೆ ಪಡೆಯಲಾಗಿದ್ದು ಇನ್ನುಳಿದ ನಾಲ್ಕು ಮಂದಿಗೆ ಪೊಲೀಸರು ಬಲೆ ಬೀಸಿದ್ದು, ಮಿಂಚಿನ ಕಾರ್ಯಚರಣೆಗೆ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ.

ಜಾಹೀರಾತು