Friday, September 20, 2024
ಸುದ್ದಿ

ಕರ್ನಾಟಕದ ಹಿರಿಯ ಸ್ವಯಂಸೇವಕ ಶ್ರೀ ಚಂಪಕನಾಥ ನಿಧನ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕದ ಹಿರಿಯ ಸ್ವಯಂಸೇವಕರಲ್ಲೊಬ್ಬರಾದ ಶ್ರೀ ಚಂಪಕನಾಥ ಜಿ ಇನ್ನಿಲ್ಲ. 1942 ರಲ್ಲಿ ಬೆಂಗಳೂರಿನಲ್ಲಿ ಸಂಘ ಪ್ರಾರಂಭವಾದಾಗ ಬಂದ ಮೊದಲ ಬ್ಯಾಚ್ ನ ಸ್ವಯಂ ಸೇವಕರಲ್ಲಿ ಇವರೂ ಒಬ್ಬರು.

1946 ರಲ್ಲಿ ಹೊ.ವೆ. ಶೇಷಾದ್ರಿ ಜೀ, ಚಂಪಕನಾಥ ಜೀ, ಕೃ. ಸೂರ್ಯನಾರಾಯಣ ಜೀ ಈ ಮೂವರು ಕರ್ನಾಟಕದಿಂದ ಹೊರಟ ಮೊದಲ ತಂಡದ ಪ್ರಚಾರಕರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರ ಸಂಪರ್ಕಕ್ಕೆ ಬಂದ ಎಲ್ಲರಿಗೂ ಅವರ ಸರಳತೆ, ವಿನಯ, ನಿರಾಡಂಬರ, ಮೃದು ಮಾತು, ಪ್ರೀತಿಯ ವ್ಯವಹಾರ ಚಿರಪರಿಚಿತ.  ಧೀರ್ಘ ಕಾಲದ ಬದುಕಿನುದ್ದಕ್ಕೂ ಸಂಘ ಕಾರ್ಯದ ಬಗ್ಗೆ ಅವರ ನಿಷ್ಠೆ, ಶ್ರದ್ಧೆ ಎಲ್ಲರಿಗೂ ಅನುಕರಣೀಯ.

ಜಾಹೀರಾತು