Friday, September 20, 2024
ಸುದ್ದಿ

ಕಾಲೇಜು ವಿದ್ಯಾರ್ಥಿನಿಗೆ ವಾರ್ಡನ್‌ನಿಂದ ಹಲ್ಲೆ, ಜೀವ ಬೆದರಿಕೆ – ಕಹಳೆ ನ್ಯೂಸ್

ಕುಂದಾಪುರ: ಹಾಸ್ಟೆಲ್‌ಗಳಲ್ಲಿ ಇತ್ತೀಚಿಗೆ ಸೇಫ್ಟಿಯೇ ಇಲ್ಲದಂತಾಗಿದೆ ಯಾಕೆಂದ್ರೆ ರಕ್ಷಣೆ ನೀಡಬೇಕಾದ ವಾರ್ಡನ್ ಭಕ್ಷಕನಾಗಿರೋ ಘಟನೆ ಕುಂದಾಪುರದ ಇಸಿಆರ್ ಕಾಲೇಜು ಲೇಡಿಸ್ ಹಾಸ್ಟೇಲ್‌ನಲ್ಲಿ ನಡೆದಿದೆ.

ಆಂಧ್ರ ಮೂಲದ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ವಾರ್ಡನ್‌ನಿಂದ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದಾಳೆ. ಸದ್ಯ ಹಲ್ಲೆಗೊಳಗಾದ ವಿದ್ಯಾರ್ಥಿನಿ ಜ್ಯೋತ್ಸ್ನಾ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಹಾಸ್ಟೆಲ್ ವಾರ್ಡನ್ ಅನಿಷಾ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಕಾಲೇಜು ಪ್ರಿನ್ಸಿಪಾಲ್ ಬಳಿ ದೂರು ನೀಡಿದ ಹಿನ್ನಲೆಯಲ್ಲಿ ಹಲ್ಲೆ ನಡೆದಿದೆ. ಘಟನೆ ವೇಳೆ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರಾದ ಮಾಳುಕೃಷ್ಣ, ಅಥಿರಾ, ಮೋಳ್, ಆರ್ಯ ಮತ್ತು ಸನು ಹಲ್ಲೆಗೆ ಸಹಕರಿಸಿದ್ದಾರೆ.

ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಕಾಲೇಜಿನ ಡೇರೆಕ್ಟರ್ ಮಹಿಮಾ, ಚೇರ್‌ಮೆನ್ ಮಧುಸೂಧನ ಮತ್ತು ರಿಯಾಜ್ ಬಂದು ಗಲಾಟೆ ತಪ್ಪಿಸಿ ನನ್ನನ್ನು ಆಸ್ಪತ್ರೆಗೆ ದಾಖಲಿಸಿದ ನಿಹಾರಿಕಾ ಮತ್ತು ಹರಿಕಾ ಅವರಿಗೂ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿ ಜ್ಯೋತ್ಸ್ನಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.