Friday, September 20, 2024
ಸುದ್ದಿ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಪುತ್ತೂರು ಮೂಲದ ವಿಜಯಲಕ್ಷ್ಮಿ ಎಂಬ ಮಹಿಳೆಯ ಮೃತದೇಹ ಪತ್ತೆ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಪತ್ತೆಯಾದ ಮಹಿಳೆಯೋರ್ವರ ಮೃತ ದೇಹದ ಗುರುತು ಪತ್ತೆಯಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಮಹಾವೀರ ಆಸ್ಪತ್ರೆಯ ಬಳಿಯ ಶ್ರೀನಿವಾಸ ಎಂಬವರ ಪತ್ನಿ ವಿಜಯಲಕ್ಷ್ಮೀ(೫೫ವ) ಎಂಬವರು ಎಂದು ಗುರುತಿಸಲಾಗಿದೆ. ಕೆರೆಯಿಂದ ಮೃತ ದೇಹವನ್ನು ಮೇಲಕೆತ್ತಿದ ಬಳಿಕ ಮಹಿಳೆಯ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತ ದೇಹವನ್ನು ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಬಳಿಕ ಮೃತ ದೇಹದ ಮುಖದ ಭಾವ ಚಿತ್ರ ಸಹಿತ ವೆಬ್ ಸೈಟ್ ನ್ಯೂಸ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಗುರುತ ಪತ್ತೆಗಾಗಿ ವರದಿ ಮಾಡಲಾಗಿತ್ತು. ಇದರ ಮಾಹಿತಿ ಆದರಿಸಿ ಮೃತರ ಮನೆಮಂದಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ.

ಜಾಹೀರಾತು