Friday, September 20, 2024
ಸುದ್ದಿ

ಅಪರೂಪದ ನೀಲಗಾಯ್ ಹುಲಿ ದಾಳಿಗೆ ಬಲಿ – ಕಹಳೆ ನ್ಯೂಸ್

ಚಿಕ್ಕಮಗಳೂರು: ಕರ್ನಾಟಕದಲ್ಲಿ ಅಪರೂಪಕ್ಕೆ ಗೋಚರವಾಗಿದ್ದ ನೀಲಗಾಯ್ ಹುಲಿ ದಾಳಿಗೆ ತುತ್ತಾಗಿ ಅಸುನೀಗಿದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಘಟನೆ ಕಳೆದ ವರ್ಷ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಗೋಚರಿಸಿಕೊಂಡಿತ್ತು.

ನೀಲಗಾಯ್ ಉತ್ತರ ಭಾರತದಲ್ಲಿ ಅತ್ಯಂತ ಹೇರಳವಾಗಿ ಕಾಣಸಿಗುತ್ತೆ. 20 ವರ್ಷದ ಬಳಿಕ ಕಳೆದ ಒಂದು ವರ್ಷದ ಹಿಂದೆ ಗೋಚರವಾಗಿದ್ದ ನೀಲಗಾಯ್ ಹುಲಿ ದಾಳಿಗೆ ಬಲಿಯಾಗಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು