Friday, September 20, 2024
ಸುದ್ದಿ

BREAKING NEWS : ಅನಂತ್​ ಕುಮಾರ್​ ಅಕಾಲಿಕ ಮರಣದಿಂದ ತೆರವಾದ ಮಂತ್ರಿ ಸ್ಥಾನ ಯಾರಿಗೆ ಗೊತ್ತೇ? – ಕಹಳೆ ನ್ಯೂಸ್

ಬೆಂಗಳೂರು (ನ. 13): ನಿನ್ನೆ ಮುಂಜಾನೆ ನಿಧನರಾದ ಕೇಂದ್ರ ಸಚಿವ ಅನಂತ್​ ಕುಮಾರ್​ ಅವರು ನಿರ್ವಹಿಸುತ್ತಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ಡಿ.ವಿ. ಸದಾನಂದ ಗೌಡರಿಗೆ ವಹಿಸಲಾಗಿದೆ.

ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಸಾಂಖ್ಯಿಕ ಮತ್ತು ಯೋಜನೆಗಳ ಜಾರಿ ಸಚಿವರಾಗಿ ಅಧಿಕಾರದಲ್ಲಿರುವ ಡಿ.ವಿ. ಸದಾನಂದ ಗೌಡರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಈ ಮೂಲಕ ಕರ್ನಾಟಕದವರೇ ಆದ ಡಿ.ವಿ. ಸದಾನಂದ ಗೌಡರಿಗೆ ಅನಂತ್​ ಕುಮಾರ್​ ಅವರ ಅಕಾಲಿಕ ಸಾವಿನಿಂದ ತೆರವಾದ ಮಂತ್ರಿ ಸ್ಥಾನ ಲಭಿಸಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಸಂಸದೀಯ ವ್ಯವಹಾರಗಳ ಖಾತೆಯನ್ನೂ ದಿ. ಅನಂತ್​ ಕುಮಾರ್​ ನಿರ್ವಹಿಸುತ್ತಿದ್ದರು. ಈ ಖಾತೆಯನ್ನು ಈಗ ಕೇಂದ್ರ ಪಂಚಾಯತ್​ ರಾಜ್​ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ನರೇಂದ್ರ ಸಿಂಗ್​ ತೋಮರ್​ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಂಚಿಕೆ ಮಾಡಿದ್ದಾರೆ. ಖಾತೆ ಬದಲಾವಣೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಅಂಕಿತ ಸಿಕ್ಕಿದೆ.