Wednesday, February 5, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಮೀನಿನಲ್ಲಿದ್ದ ರಾಜೇಶ್ ಬನ್ನೂರು ಮನೆ ತೆರವು ವಿವಾದ : ಮನೆ ಮುಂದೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ; ಸ್ಥಳಕ್ಕಾಗಮಿಸಿದ  ಪೊಲೀಸರು-ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಮೀನಿನಲ್ಲಿದ್ದ ರಾಜೇಶ್ ಬನ್ನೂರು ಅವರ ಮನೆಯನ್ನು ಮಂಗಳವಾರ ತಡರಾತ್ರಿ ತೆರವು ಮಾಡಿದ್ದು, ಬುಧವಾರ ಬೆಳಿಗ್ಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.

ತಡರಾತ್ರಿ ಸುಮಾರು 2.30ರಿಂದ 3 ಗಂಟೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ದೂರಲಾಗಿದೆ. ಮಂಗಳೂರಿನ ಜಾತ್ರೆಗೆ ತೆರಳಿದ್ದ ವೇಳೆ ಹಿಂಭಾಗದಿAದ ಜೆಸಿಬಿ ಮೂಲಕ ಮನೆಯನ್ನು ದೂಡಿ ಹಾಕಲಾಗಿದೆ. ಇದನ್ನು ಪ್ರಶ್ನಿಸಲು ಮುಂದಾದಾಗ ಮಾಸ್ಕ್ ಧರಿಸಿದ್ದ ಕೆಲವರು ತನ್ನನ್ನು ಹಿಡಿದುಕೊಂಡರು. ಬಲಾತ್ಕಾರವಾಗಿ ತನ್ನನ್ನು ಹಿಡಿದುಕೊಂಡಿದ್ದು, ಕೈ ಮೇಲೆ ಪರಚಿದ ಗಾಯಗಳಿವೆ ಎಂದು ಪೊಲೀಸರಿಗೆ ರಾಜೇಶ್ ಬನ್ನೂರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳದಲ್ಲಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರು ಎಫ್.ಐ.ಆರ್. ದಾಖಲಿಸುವಂತೆ ಒತ್ತಾಯಿಸಿದರು. ಜಾಗ ಬಿಟ್ಟುಕೊಡಲು ನಮ್ಮದೇನು ತಕರಾರಿಲ್ಲ. ಆದರೆ ಒಂದು ಮಾತನ್ನು ಹೇಳದೇ, ಗೂಂಡಾಗಳ ರೀತಿ ಮನೆಯನ್ನು ದೂಡಿ ಹಾಕುವುದು ಎಂದರೆ ಏನರ್ಥ. ಗ್ಯಾಸ್ ಸಿಲಿಂಡರನ್ನು ತೋಡಿಗೆ ಎಸೆಯಲಾಗಿದೆ. ಮನೆ ಒಳಗಡೆಯಿದ್ದ ಕಪಾಟುಗಳು ಮಣ್ಣಿನಡಿ ಸಿಲುಕಿಕೊಂಡಿವೆ. ಒಂದು ವೇಳೆ ಮನೆಯವರು ಒಳಗಡೆ ಇದ್ದಿದ್ದರೆ, ಅವರನ್ನು ಕೊಂದು ಹಾಕುತ್ತಿದ್ದರು. ಹಾಗಾಗಿ ಎಫ್.ಐ.ಆರ್. ದಾಖಲಿಸಲೇ ಬೇಕು ಎಂದು ಪಟ್ಟು ಹಿಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭ ಮಾತನಾಡಿದ ಪೊಲೀಸ್ ನಿರೀಕ್ಷಕ, ಜಾಗ ದೇವಸ್ಥಾನದ ಹೆಸರಿನಲ್ಲಿರುವುದರಿಂದ ಆಡಳಿತಾಧಿಕಾರಿಯವರನ್ನು ಬರಲು ತಿಳಿಸಿದ್ದೇನೆ. ಇನ್ನೊಂದು ಗಂಟೆಯಲ್ಲಿ ಬರುವುದಾಗಿ ತಿಳಿಸಿದ್ದಾರೆ. ಅವರು ಬಂದ ತಕ್ಷಣ ಮಾಹಿತಿ ಪಡೆದುಕೊಂಡು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದರಿಂದ ಆಕ್ರೋಶಿತರಾದ ಬಿಜೆಪಿ ಕಾರ್ಯಕರ್ತರು, ಜಾಗಕ್ಕೂ ಮನೆ ದೂಡಿ ಹಾಕಿರುವುದಕ್ಕೂ ಯಾವುದೇ ಸಂಬAಧವೇ ಇಲ್ಲ. ಮನೆ ದೂಡಿ ಹಾಕಿರುವುದು ಕ್ರಿಮಿನಲ್ ಪ್ರಕರಣ ಎಂದು ವಾದಿಸಿದರು.

ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಹಾಗದರೆ ಪೊಲೀಸರಿಗೆ ತಿಳಿಸಿಯೇ ಈ ರೀತಿಯ ಗೂಂಡಾ ವರ್ತನೆ ತೋರಿಸಿದ್ದಾರೆ. ಹಾಗಾಗಿ ಪೊಲೀಸರು ಹೀಗೆ ಮಾತನಾಡುತ್ತಿದ್ದಾರೆ ಎಂದರು.

ಸಮಾಧಾನಿಸಿದ ಪೊಲೀಸರು, ಇಂತಹ ಆರೋಪಗಳೆಲ್ಲಾ ಸರಿಯಲ್ಲ. ಪೊಲೀಸರು ನ್ಯಾಯಯುತವಾದ ಕ್ರಮವನ್ನೇ ಕೈಗೊಳ್ಳುತ್ತೇವೆ. ಎಫ್.ಐ.ಆರ್. ದಾಖಲಿಸುವ ಮೊದಲು ಒಂದಷ್ಟು ಪರಿಶೀಲನೆ ನಡೆಸುವುದು ಅಗತ್ಯ ಎಂದು ತಿಳಿಸಿದರು.

ಈ ಸಂದರ್ಭ ಮಾತನಾಡಿದ ಜಗದೀಶ್ ಶೆಣೈ ಅವರು, ಮುಂದೆ ಪೊಲೀಸ್ ಠಾಣೆಗೂ ಇದೇ ಪರಿಸ್ಥಿತಿ ಬರಲಿದೆ. ದೇವಳ ದ್ವಾರದ ಬಳಿಯಿರುವ ಪೊಲೀಸ್ ಠಾಣೆಗೆ ಹಿನ್ನೆಲೆ ಇದೆ. ಬ್ರಿಟಿಷರ ಕಾಲದಿಂದಲೂ ಈ ಠಾಣೆಯಿದ್ದು, ದೇವಳದಿಂದಲೂ ಪ್ರತಿ ಜಾತ್ರೋತ್ಸವಕ್ಕೆ ಗೌರವ ನೀಡಲಾಗುತ್ತದೆ ಎನ್ನುವುದನ್ನು ಮರೆಯದಿರಿ. ಗೂಂಡಾಗಳ ರೀತಿ ಏಕಾಏಕೀ ಬಂದು ಮನೆ, ಅಂಗಡಿಗಳನ್ನು ಒಡೆದುಹಾಕುತ್ತಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.