Friday, September 20, 2024
ಸುದ್ದಿ

ಬಂಟ್ವಾಳದ ಮುಡ್ಡಾಲ್ ಗುಡ್ಡೆ ಎಂಬಲ್ಲಿ ಅಪಘಾತ ; ಚಾಲಕ ಅಪಾಯದಿಂದ ಪಾರು – ಕಹಳೆ ನ್ಯೂಸ್

ಬಂಟ್ವಾಳ : ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾತ್ರಿ ಬಂಟ್ವಾಳದಲ್ಲಿ ನಡೆದಿದೆ. ಬಡಗಬೆಳ್ಳೂರು ನಿವಾಸಿ ಅಬ್ದುಲ್ ತನಜೀರ್ ಅತನ ಸ್ನೇಹಿತನ ವಾಹನ ಪಡೆದು ಮನೆಗೆ ಬರುತ್ತಿದ್ದ ಎಂದು ಹೇಳಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಧರ್ಮಸ್ಥಳ ಮಂಗಳೂರು ನಡುವೆ ಜಕ್ರಿಬೆಟ್ಟು ಸಮೀಪದ ಮುಡ್ಡಾಲ್ ಗುಡ್ಡೆ ಎಂಬಲ್ಲಿ ಅತೀ ವೇಗದಿಂದ ಜೀಪೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಗುಡ್ಡ ಏರಿದ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಚಾಲಕನಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಬಿಟ್ಟರೆ ವಾಹನದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಜಾಹೀರಾತು