Wednesday, April 2, 2025
ಉಡುಪಿಸುದ್ದಿ

ತಡರಾತ್ರಿವರೆಗೆ ಯಕ್ಷಗಾನ – ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಯಕ್ಷಗಾನ ನಿಲ್ಲಿಸಿದ ಪೊಲೀಸರು – ಕಹಳೆನ್ಯೂಸ್

ಉಡುಪಿ : ಉಡುಪಿಯ ಅಲೆವೂರಿನಲ್ಲಿ ತಡರಾತ್ರಿ ನಡೆಯುತ್ತಿದ್ದ ಯಕ್ಷಗಾನವನ್ನು ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಬಂದು ನಿಲ್ಲಿಸಿದ ಪ್ರಸಂಗ ನಡೆದಿದೆ.

ಅಲೆವೂರಿನ ಸಂಕಲ್ಪ‌ ಸಂಭಾಂಗಣದಲ್ಲಿ 12-30 ತನಕ ಯಕ್ಷಗಾನ ನಡೆಯುತ್ತಿತ್ತು. ಮಡಾಮಕ್ಕಿ ಮೇಳದವರು ಈ ಯಕ್ಷಗಾನ ಪ್ರಸಂಗ ನಡೆಸುತ್ತಿದ್ದರು. ತಡರಾತ್ರಿಯಾದ ಕಾರಣ ಯಾರೋ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಯಕ್ಷಗಾನ ನಿಲ್ಲಿಸುವಂತೆ ಮನವಿ ಮಾಡಿದ್ದು, ಅದರಂತೆ ಯಕ್ಷಗಾನ ನಿಲ್ಲಿಸಲಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ