Friday, September 20, 2024
ಸುದ್ದಿ

ಅಖಿಲ ಹವ್ಯಕ ಮಹಾಸಭಾದಿಂದ ಪುತ್ತೂರಿನಲ್ಲಿ ದಿವಂಗತ ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಭೆ – ಕಹಳೆ ನ್ಯೂಸ್

ಪುತ್ತೂರು : ಕೇಂದ್ರ ಸರಕಾರದ ಕ್ಯಾಬಿನೆಟ್ ಸಚಿವ ದಿ ಅನಂತಕುಮಾರ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಸಂತಾಪ ಸಭೆಯನ್ನು ಅಖಿಲ ಹವ್ಯಕ ಮಹಾಸಭಾದ ಪುತ್ತೂರು ವಿಭಾಗದ ಅಧ್ಯಕ್ಷ ಶ್ರೀ ಶಿವಶಂಕರ ಭಟ್ ಬೋನಂತಾಯರ ಮನೆಯಲ್ಲಿ ಮಾಡಲಾಯಿತು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಸಂತಾಪ ಸಭೆಯಲ್ಲಿ ಮೃತರ ಬಗ್ಗೆ ಮಾಹಿತಿಯನ್ನು ಶ್ರೀಯುತ ಶಿವಶಂಕರ್ ಭಟ್ ಬೋನಂತಾಯ ಸಭೆಯಲ್ಲಿ ನೀಡಿದರು ಅಲ್ಲದೇ ಹವ್ಯಕ ವಲಯ ಪುತ್ತೂರು ಇದರ ಅಧ್ಯಕ್ಷರಾದ ಕಮ್ಮಜೆ ಕೇಶವ ಭಟ್ ಸಂತಾಪ ವ್ಯಕ್ತಪಡಿಸಿದರು ಅಲ್ಲದೆ ಮೃತರ ಮೇರು ಸಾಧನೆಗಳ ಬಗ್ಗೆ ಪುತ್ತೂರು ಹವ್ಯಕ ವಲಯ ಕಾರ್ಯದರ್ಶಿ ಜಯಾನಂದ ಕೆ ಮಾಹಿತಿಗಳನ್ನು ನೀಡಿದರು. ಗುರಿಕಾರರು ಕಟ್ಟತ್ತಿಲ ಶಂಕರ ಭಟ್ ಇವರು ಮೃತರ ಬಗ್ಗೆ ನುಡಿ ಮನಗಳನ್ನು ಸಲ್ಲಿಸಿದರು. ಹವ್ಯಕ ವಲಯ ಪುತ್ತೂರು ಇದರ ಪದಾಧಿಕಾರಿಗಳಾದ ಭಾಗ್ಯಲಕ್ಷ್ಮಿ ಅರ್ತಿಕಜೆ ಶಾಂತಾ ಕೋಟೆ ವರಲಕ್ಷ್ಮಿ ಗಾಯತ್ರಿ ಶಿವಶಂಕರ ಭಟ್ ಹೈಮಾವತಿ ಲಲಿತಾ ಶಾಮಲಾ ಶಾರದಾ ಗೋವಿಂದ ಭಟ್ಟ ಸುಧಾ ಕೆ ಟಿ ಭಟ್ ಶಂಕರಿ ಕ್ಷಮಾ ರಾಮಚಂದ್ರ ಭಟ್ ಸಂತೋಷ ಬೋನಂತಾಯ ಮತ್ತಿತರು ಸಭೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು