ಮಂಡ್ಯ : ದೇಶದಲ್ಲಿರುವ ದಲಿತರು, ಹಿಂದುಳಿದವರು, ಹಾಗೂ ಅಲ್ಪ ಸಂಖ್ಯಾತರಿಗೆ ಮಾನ, ಸನ್ಮಾನ, ಸ್ವಾಭಿಮಾನ ಸಿಗಲು ಬಹುಜನರ ಪ್ರತಿನಿಧಿಯಾದ ಮಾಯಾವತಿ ಪ್ರಧಾನಿ ಆಗಬೇಕು. ಅದಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ತಪ್ಪಿಲ್ಲ ಅಂತ ಶಾಸಕ ಎನ್. ಮಹೇಶ್ ಹೇಳಿದ್ದಾರೆ.
ಎನ್ ಮಹೇಶ್ ಈ ರೀತಿಯಾಗಿ ಹೇಳಿಕೆ ನೀಡಿರುವು ರಾಜಕೀಯ ವಲಯದಲ್ಲಿ ಹುಬ್ಬೇರಿಸುವಂತೆ ಮಾಡಿದೆ. ಮಾಯಾವತಿ ಪರ ಮಾತುಕತೆ ನಡೆಸಿದ ಮಹೇಶ್ ಬಹುಜನರ ವರ್ಗ ದೇಶದ ಚುಕ್ಕಾಣಿ ಹಿಡಿಬೇಕು ಅನ್ನೋದು ಡಾ. ಬಿ.ಆರ್.ಅಂಬೇಡ್ಕರ್ರವರ ಕನಸ್ಸಾಗಿತ್ತು. ಇಂದು ಬಿಎಸ್ಪಿಗೆ ಅಪಾರ ಬೇಡಿಕೆ ಇದೆ. ಹಲವು ಪಕ್ಷಗಳು ಈ ವೇಳೆ ಹಲವು ಪಕ್ಷಗಳು ಬಿಎಸ್ಪಿ ಜೊತೆ ಮೈತ್ರಿ ಕೂಟ ಮಾಡಲು ಮುಂದೆ ಬಂದಿದೆ ಎಂದಿದ್ದಾರೆ.