Monday, April 7, 2025
ಜಿಲ್ಲೆದಕ್ಷಿಣ ಕನ್ನಡಸುದ್ದಿ

ಮಾರ್ಚ್ 1 ರಿಂದ 9 ರ ವರೆಗೆ ಕಾರ್ಮಾರು ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ-ಕಹಳೆ ನ್ಯೂಸ್

 ಬದಿಯಡ್ಕ:  ಕಾರ್ಮಾರು ಶ್ರೀ ‌ಮಹಾವಿಷ್ಣು ಕ್ಷೇತ್ರದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಗೌರವಾಧ್ಯಕ್ಷತೆಯಲ್ಲಿ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮಾರ್ಚ್ 1 ರಿಂದ 9 ರ ವರೆಗೆ ಜರಗಲಿರುವುದು.

1400 ವರ್ಷಗಳ ಇತಿಹಾಸ ಹೊಂದಿದ ಕಾರ್ಮಾರು ಕ್ಷೇತ್ರದಲ್ಲಿ  32 ವರ್ಷಗಳ ಬಳಿಕ ನೂತನ ಶಿಲಾಮಯ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತುಗೋಪುರ, ರಾಜಗೋಪುರದೊಂದಿಗೆ‌ ನವೀಕರಣಗೊಂಡಿದೆಯೆಂದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಚ್ 1 ರಂದು ಬೆಳಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಕೆಡೆಂಜಿ ಶ್ರೀ ‌ಮಹಾವಿಷ್ಣು ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಹೊರಡಲಿದೆ. ಪ್ರತಿದಿನ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಯತಿಶ್ರೇಷ್ಟರು, ನಾಡಿನ ಗಣ್ಯರು ಭಾಗವಹಿಸುವರು. ಸಂಗೀತ, ನೃತ್ಯ, ಯಕ್ಷಗಾನ, ಭಜನೆ ಇರುವುದು. 9 ದಿನಗಳಲ್ಲಿ 9 ಯತಿವರೇಣ್ಯರು ಆಗಮಿಸುವರು, ಸಮಾರೋಪದಲ್ಲಿ ಮೈಸೂರು ರಾಜರಾದ ಶ್ರೀ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸುವರು. ಮಾರ್ಚ್ 6 ರಂದು ಮಹಾವಿಷ್ಣು ದೇವರ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಜೀವ ಕಲಶಾಭಿಷೇಕ, ನಿದ್ರಾ ಕಲಶಾಭಿಷೇಕ, ಪ್ರತಿಷ್ಠಾ ಬಲಿ ನಡೆಯಲಿರುವುದು. ಮಾರ್ಚ್ 9 ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮಹೇಶ್ ವಳಕುಂಜ, ಶ್ರೀಕೃಷ್ಣ ಭಟ್, ಗೋಪಾಲ ಭಟ್ ವಿ.ಎಸ್, ರಾಮ ಕಾರ್ಮಾರು, ಶ್ಯಾಮ ಪ್ರಸಾದ್ ಮಾನ್ಯ, ರಂಜಿತ್ ಮಾನ್ಯ, ಸುಂದರ ಶೆಟ್ಟಿ, ವಿಜಯ ಕುಮಾರ್ ಮಾನ್ಯ, ಮಾನ‌ ಮಾಸ್ತರ್ ಮೊದಲಾದವರು ಉಪಸ್ಥಿತರಿದ್ದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ